ಜಿ.ಪಂ.ನಿವೃತ್ತ ನೌಕರರಾದ ಭದ್ರಾವತಿಯ ಶ್ರೀಯುತ ರಾಮಲಿಂಗೇಗೌಡ ನಿಧನ- ಸಂತಾಪ

ಭದ್ರಾವತಿ: ಜಿ.ಪಂ.ನಿವೃತ್ತ ನೌಕರರಾದ ಭದ್ರಾವತಿಯ ಶ್ರೀಯುತ ರಾಮಲಿಂಗೇಗೌಡರವರು ದಿನಾಂಕ: 10-10-2025 ರಂದು ಶುಕ್ರವಾರ ಬೆಳಿಗ್ಗೆ  5-30 ಕ್ಕೆ ನಿಧನ ಹೊಂದಿರುತ್ತಾರೆ.

    ಭದ್ರಾವತಿಯ ಬಂಡಾರಹಳ್ಳಿಯ   ಬೀರೇಶ್ವರ ಕಲ್ಯಾಣ ಮಂಟಪದ ಹತ್ತಿರ ಇರುವ ಮೃತರ ಸ್ವಗೃಹದಲ್ಲಿ  ಮೃತದೇಹವನ್ನು ಅಂತಿಮದರ್ಶನಕ್ಕಾಗಿ ಇಡಲಾಗಿದೆ ಎಂದು ತಿಳಿದು ಬಂದಿದೆ.

    ನಿಧನ ಸುದ್ದಿ ತಿಳಿದ ಕೂಡಲೇ ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ತಿಮ್ಮೆಗೌಡರವರು ಮತ್ತು ಶಾರದಾ ಅಪ್ಪಾಜಿರವರು  ಮೃತರ ಸ್ವಗೃಹಕ್ಕೆ ತೆರಳಿ ಮೃತರ ಅಂತಿಮ ದರ್ಶನ ಪಡೆದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ..ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೀ ಎಂದು ಪ್ರಾರ್ಥಿಸಿದ್ದಾರೆ.

       ಮೃತರು ಇಬ್ಬರು ಗಂಡು ಮಕ್ಕಳು ಮತ್ತು ಹೆಂಡತಿ ಮಾಲಾ ಹಾಗೂ ಸೊಸೆಯಂದಿರು ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಮತ್ತು ಸ್ನೇಹಿತರನ್ನು ಬಿಟ್ಟು ಅಗಲಿದ್ದಾರೆ.

       ಮೃತ ದೇಹದ ಅಂತಿಮ ಸಂಸ್ಕಾರವನ್ನು ಇಂದು ರುದ್ರಭೂಮಿಯಲ್ಲಿ ವಿಧಿ ವಿಧಾನಗಳೋಂಧಿಗೆ ಸಂಜೆ ನೇರವೇರಿಸಲಾಗುವುದು ಎಂದು ತಿಳಿದುಬಂದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.