ಭದ್ರಾವತಿ VISL ಫ್ಯಾಕ್ಟರಿಯಲ್ಲಿ ತಾಮ್ರದ ತಂತಿ ಕಳುವು ಪ್ರಕರಣ: ಇಬ್ಬರ ಬಂಧನ
ಭದ್ರಾವತಿ: ದಿನಾಂಕ:-08-09-2024 ರಂದು ರಾತ್ರಿ ಯಾರೋ ಕಳ್ಳರು *ವಿ.ಐ.ಎಸ್.ಎಲ್ ಫ್ಯಾಕ್ಟರಿ ಒಳಗಡೆ* ಸೆಂಟ್ರಲ್ ಎಲೆಕ್ಟಿಕಲ್ ವರ್ಕ ಶಾಪ್ ರಿಪೇರಿ ಮಾಡಲು ತಂದಿದ್ದ ವೇಲ್ಡಿಂಗ್ ಮಷಿನ್ ನಲ್ಲಿ ಇದ್ದ *35,000/-ರೂ ಬೆಲೆ ಬಾಳುವ 50 ಕೆ ಜಿ ತೂಕದ ತಾಮ್ರದ ವೈಂಡಿಂಗ್ ಗಳನ್ನು* ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು *ಶ್ರೀ ಎಲ್ ಪ್ರವೀಣ್ ಕುಮಾರ್ ರವರು ವಿ ಐ ಎಸ್ ಎಲ್ ಸೆಕ್ಯೂರಿಟಿ ಗಾರ್ಡ್* ರವರು ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0151/2024 ಕಲಂ 331(3) 331(3) 305 ಬಿಎನ್ಎಸ್ ಆಕ್ಟ್-2023* ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತೆ.
ಈ ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ಮಾಲು ಪತ್ತೆಗಾಗಿ *ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ *ಶ್ರೀ ಎ. ಜಿ. ಕಾರಿಯಪ್ಪ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, *ಶ್ರೀ ನಾಗರಾಜ್,* ಪೊಲೀಸ್ ಉಪಾದೀಕ್ಷಕರವರು ಭದ್ರಾವತಿ ಉಪ ವಿಭಾಗ *ಶ್ರೀ ಶ್ರೀಶೈಲಕುಮಾರ್* ಸಿಪಿಐ ನಗರ ವೃತ್ತ ಭದ್ರಾವತಿ ರವರ ಮೇಲ್ವಿಚಾರಣೆಯಲ್ಲಿ *ಶ್ರೀ ರಮೇಶ್. ಟಿ* ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ ಮತ್ತು *ಶ್ರೀ ಮಂಜಪ್ಪ* ಎಎಸ್ಐ ಹಾಗೂ ಸಿಬ್ಬಂದಿಗಳಾದ ಸಿ ಹೆಚ್ ಸಿ - ನವೀನ್ ಮತ್ತು ಸಿಪಿಸಿ ಪ್ರಸನ್ನ ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ಪ್ರಕರಣದ *ಆರೋಪಿಗಳಾದ 1) ವೆಂಕಟೇಶ @ ಬುಡ್ಡಾ,* 29 ವರ್ಷ, ಹೊಸ ಕೋಡಿಹಳ್ಳಿ ಗ್ರಾಮ ದೇವನರಸೀಪುರ, ಭದ್ರಾವತಿ, *2) ಮುನೀರ್ ಜಾನ್ @ ತಿಕಲ,* ಎಕಿನ್ಸಾ ಕಾಲೋನಿ ಭದ್ರಾವತಿ ರವರನ್ನು ದಸ್ತಗಿರಿ ಮಾಡಿ ಸದರಿಯವರಿಂದ ಪ್ರಕರಣಕ್ಕೆ ಸಂಬಂಧಿಸಿದ, *ಅಂದಾಜು ಮೌಲ್ಯ 36,500/- ರೂಗಳ ಬೆಲೆಯ 37 ಕೆಜಿ ತೂಕದ ತಾಮ್ರದ ತಂತಿ* ಮತ್ತು ಕೃತ್ಯಕ್ಕೆ ಬಳಸಿದ *ಅಂದಾಜು ಮೌಲ್ಯ 50,000/- ರೂಗಳ ದ್ವಿಚಕ್ರವಾಹನ* ಮತ್ತು *ಅಂದಾಜು ಮೌಲ್ಯ 50,000/- ರೂಗಳ ಪ್ಯಾಸೆಂಜರ್ ಆಟೋ* ಸೇರಿ *ಒಟ್ಟು 1,36,500/- ರೂಗಳ ಮಾಲನ್ನು ಅಮಾನತ್ತು* ಪಡಿಸಿಕೊಂಡಿರುತ್ತಾರೆ.
ಸದರಿ ತನಿಖಾ ತಂಡದ *ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ* ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
Leave a Comment