ಇದೀಗ ಶಿವಮೊಗ್ಗದಲ್ಲಿ ಮೇ 15 ರಿಂದ ಕಾವೇರಿ-2 ತಂತ್ರಾಂಶ ಜಾರಿ:ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ

ಶಿವಮೊಗ್ಗ: ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಕಚೇರಿಯಲ್ಲಿ ಮ್ಯಾನ್ಯುಯಲ್ ಪದ್ದತಿ ಮೊದಲು ಜಾರಿಗೆ ಇತ್ತು.ತದನಂತರ 2003 ರಿಂದ ಕಾವೇರಿ -1 ತಂತ್ರಾಂಶ ಇತ್ತು. ಇದೀಗ ಕಾವೇರಿ-2 ಹೊಸ ತಂತ್ರಾಂಶ 15 ಜಿಲ್ಲೆಯಲ್ಲಿ ಜಾರಿ ಇದೆ. ಇದೀಗ ಶಿವಮೊಗ್ಗದಲ್ಲಿ ಮೇ 15 ರಿಂದ ಕಾವೇರಿ-2 ಜಾರಿಗೆ ಬರಲಿದೆ. ಕಾವೇರಿ-1 ತಂತ್ರಾಂಶದ ಸಮಸ್ಯೆ ಬಗೆಹರಿಯಲಿದೆ. ಸಾರ್ವಜನಿಕರಿಗೆ ಕಾಯುವ ಆಗಿಲ್ಲ. ನೊಂದಣಿ ಮೊದಲೇ ತಮ್ಮ ದಾಖಲೆ upload ಮಾಡಬಹುದು.ಈಗಾಗಲೇ ಕಂಪ್ಯೂಟರ್ ಆಪರೇಟರ್ ಗಳಿಗೆ ಹೊಸ ತಂತ್ರಾಂಶದ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಶಿವಮೊಗ್ಗದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳಾದ ಗಿರೀಶ್ ಮತ್ತು  ಸಿ. ಚೇತನ್, ಮಾಹಿತಿ ನೀಡಿದರು.
ಇಂದು ಬೆಳಿಗ್ಗೆ ಶಿವಮೊಗ್ಗದ  ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ಈ ಸೇವೆಗಳು ನಾಗರಿಕರು ತಮ್ಮ ಸ್ಲಾಟ್‌ಗಳನ್ನು ಬುಕ್ ಮಾಡುವ ಸಮಯದಲ್ಲಿ ಪೂರ್ವ-ನೋಂದಣಿ ವಿವರಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ಸಕ್ರಿಯಗೊಳಿಸುತ್ತವೆ. ನೋಂದಣಿ ದಾಖಲೆಗಳಲ್ಲಿ ಯಾವುದೇ ದೋಷಗಳನ್ನು ತಪ್ಪಿಸಲು ಇದು ನಾಗರಿಕರಿಗೆ ಸಹಾಯ ಮಾಡುತ್ತದೆ. ನೋಂದಣಿ ಸಮಯದಲ್ಲಿ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಬಹುದು. ಇದು ನೋಂದಣಿಗಾಗಿ ನಾಗರಿಕರ ಕಾಯುವ ಸಮಯವನ್ನು ತಪ್ಪಿಸುತ್ತದೆ. ಹೆಚ್ಚುವರಿಯಾಗಿ, ಡಾಕ್ಯುಮೆಂಟ್ ನೋಂದಣಿಗೆ ತೆಗೆದುಕೊಳ್ಳುವ ಸರಾಸರಿ ಸಮಯವು 15 ನಿಮಿಷಗಳಿಂದ 10 ನಿಮಿಷಗಳಿಗೆ ಕಡಿಮೆಯಾಗುತ್ತದೆ ಎಂದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಕಾವೇರಿ-2 ತಂತ್ರಾಂಶವನ್ನು ಈಗಾಗಲೇ ಶಿವಮೊಗ್ಗ ಉಪ ನೋಂದಣಿ ಕಛೇರಿಯಲ್ಲಿ Centre for Smart Governance, ಅಭಿವೃದ್ಧಿಪಡಿಸಿರುವ ಕಾವೇರಿ--2 ತಂತ್ರಾಂಶ ವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿರುತ್ತದೆ. 

ಮುಂದುವರೆದು, ಕಾವೇರಿ-2 
ತಂತ್ರಾಂಶವನ್ನು ರಾಜ್ಯದ ಎಲ್ಲಾ 
ನೋಂದಣಾಧಿಕಾರಿಗಳ ಕಛೇರಿ ವ್ಯಾಪ್ತಿಯ ಉಪ ನೋಂದಣಿ ಕಛೇರಿಗಳಲ್ಲಿ ಪ್ರಸ್ತಾಪಿಸಿದಂತೆ ನಿಯಮಾನುಸಾರ ಇದೀಗ ಅನುಷ್ಠಾನಗೊಳಿಸಲಾಗಿದೆ ಎಂದರು.
 
ಕಾವೇರಿ ಆನ್‌ಲೈನ್ ಸೇವೆಯು ಕರ್ನಾಟಕ ಸರ್ಕಾರದ ಮುಂದ್ರಾಂಕ ಮತ್ತು ನೋಂದಣಿ ಇಲಾಖೆಯ ವೆಬ್ ಆಧಾರಿತ ಅಪ್ಲಿಕೇಶನ್ ಆಗಿದೆ, ಇದು ದಾಖಲೆ ಮತ್ತು ವಿವಾಹ ನೋಂದಣಿಗೆ ಅಗತ್ಯವಿರುವ ನಾಗರಿಕರಿಗೆ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಸ್ಟ್ಯಾಂಪ್ ಡ್ಯೂಟಿ, ಆಸ್ತಿ ಮಾರ್ಗಸೂಚಿಗಳ ಮೌಲ್ಯ, ಡಾಕ್ಯುಮೆಂಟ್ ನೋಂದಣಿ ಮತ್ತು ಮದುವೆ ನೋಂದಣಿಗಾಗಿ ಡೇಟಾ ನಮೂದು ಇತ್ಯಾದಿಗಳ ವಿವರಗಳನ್ನು ತಿಳಿದುಕೊಳ್ಳಲು ಇದು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ. 

ಈ ಸೇವೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಒಂದು ಅತಿಥಿ ಬಳಕೆದಾರರಿಗೆ ಮತ್ತು ಇನ್ನೊಂದು ನೋಂದಾಯಿತ ಬಳಕೆದಾರರಿಗೆ ಕಾವೇರಿ-2 ಎಲ್ಲಾ ಆನ್ಲೈನ್ ಸೇವೆ ದೊರಕಲಿದೆ ಎಂದರು

ಅತಿಥಿ ಬಳಕೆದಾರರಿಗಾಗಿ ಸೇವೆಗಳು,ನೋಂದಾಯಿತ ಬಳಕೆದಾರರಿಗೆ ಸೇವೆಗಳ ಲಿಸ್ಟ್ ಮಾಡಲಾಗಿದೆ

ಸ್ಟ್ಯಾಂಪ್ ಡ್ಯೂಟಿ ಲೆಕ್ಕಾಚಾರವನ್ನು,
 ಆಸ್ತಿ ಮಾರ್ಗಸೂಚಿಗಳ ಮೌಲ್ಯವನ್ನು,
ನೇಮಕಾತಿ ಸಮಯಗಳು,
ಉಪ ರಿಜಿಸ್ಟ್ರಾರ್ ಕಛೇರಿಗಳನ್ನು ಪತ್ತೆ ಮಾಡಬಹುದು ಎಂದರು.ಡಿಜಿಟಲ್ ಸಹಿಯೊಂಧಿಗೆ ನೊಂದಣಿ ಮಾಡಲಾಗುವುದು ಎಂದರು.

ಮೇಲಿನ ಕಾವೇರಿ-2 ತಂತ್ರಾಂಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ,ಕಾವೇರಿ-2 ಜನಸ್ನೇಹಿ ತಂತ್ರಾಂಶ ವಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿ.ಎಸ್.ರವಿ.ಬಸವರಾಜ್.ಹಾಜರಿದ್ದರು.
       

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.