ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಹೋಬಳಿ ಘಟಕ ಅಸ್ಥಿತ್ವಕ್ಕೆ
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಡಿಯಲ್ಲಿ ಹೋಬಳಿ ಘಟಕ ಅಸ್ಥಿತ್ವಕ್ಕೆ ಬಂದಿದ್ದು, ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಗೋಪಾಲ್ ಯಡಗೆರೆ ಅಧಿಕೃತವಾಗಿ ಘೋಷಣೆ ಮಾಡಿದರು.
ಹೊಬಳಿ ಘಟಕದ ಅಧ್ಯಕ್ಷರಾಗಿ ಹೆಚ್.ಜಿ. ವಿಜಯರಾಜ್ (ವಿಜಯ ಕರ್ನಾಟಕ), ಉಪಾಧ್ಯಕ್ಷರಾಗಿ ರವಿಕುಮಾರ್ (ರಾಯಚೂರ್ ವಾಹಿನಿ) ಕಾರ್ಯದರ್ಶಿಯಾಗಿ ಕೆ. ರಂಗನಾಥ್ (ಕನ್ನಡಪ್ರಭ), ಖಜಾಚಿಯಾಗಿ ಕುಮಾರ್ ಅಗಸನಹಳ್ಳಿ (ಪ್ರಜಾವಾಣಿ)
ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಅವರು ಮಾತನಾಡಿ, ಸಂಘಟನೆಯ ಮೂಲಕ ಪತ್ರಕರ್ತರಿಗೆ ಗರಿಷ್ಠ ಸವಲತ್ತುಗಳು ಸಿಗಬೇಕೆಂಬುದು ನಮ್ಮ ಗುರಿ. ಯಾರನ್ನೂ ಧ್ವೇಷಿಸದೇ ಎಲ್ಲರ ಪ್ರೀತಿಯಿಂದ ಸಂಘಟನೆ ಮಾಡುವುದು ನಮ್ಮ ಉದ್ದೇಶ ಎಂದರು.
ಹೊಳೆಹೊನ್ನೂರು ಹೋಬಳಿ ಘಟಕದ ಅಧ್ಯಕ್ಷ ಹೆಚ್.ಜಿ. ವಿಜಯರಾಜ್ ಮಾತನಾಡಿ, ಎಲ್ಲರೂ ಒಂದಾಗಿ ಸಾಗೋಣ. ಪತ್ರಕರ್ತರ ಏಳಿಗೆಗಾಗಿ, ಭದ್ರತೆಗಾಗಿ ಕೆಲಸ ಮಾಡೋಣ ಎಂದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ
ಎನ್. ಮಂಜುನಾಥ್ ಮಾತನಾಡಿ, ನಂಬಿಕೆಯೇ ನಮ್ಮ ಬಲ. ಪರಸ್ಪರ ನಂಬಿಕೆಯು ನಮ್ಮನ್ನು ಕಾಪಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಗೋ. ವ. ಮೋಹನ್, ಖಜಾಂಚಿ ಶಿವಮೊಗ್ಗ ನಂದನ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಟ್ರಸ್ಟ್ ಪದಾಧಿಕಾರಿಗಳು, ಹಲವು ಪತ್ರಿಕಾ ಮಿತ್ರರು ಹಾಜರಿದ್ದರು.

Leave a Comment