ಶಿವಮೊಗ್ಗ ಹಂದಿ ಅಣ್ಣಿ ಕೊಲೆ; ಶರಣಾಗತಿಯಾದ ಆರೋಪಿಗಳ ಪೋಟೋ ವೈರಲ್ ಆಗಿದೆ ನೋಡಿ.....

ನಿನ್ನೆ ಚಿಕ್ಕ ಮಗಳೂರಿನ ಎಸ್ಪಿ ಕಚೇರಿಯಲ್ಲಿ ಶರಣಾಗತಿಯಾಗಿದ್ದ ಕಾಡಾ ಕಾರ್ತಿಕ್,ನಿತೀನ್, ಮದನ್, ಫಾರೂಕ್, ಆಂಜನೇಯ, ಚಂದನ್, ಮಧು, ಮಧು ಯಾನೆ ಕರಿಯ ಒಟ್ಟು 8 ಜನ ಆರೋಪಿಗಳನ್ನ ಮುಸುಕು ಹಾಕಿ ಕರೆದುಕೊಂಡು ಬರಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ವತನಿಖಾ ತಂಡದ ವಶದಲ್ಲಿ ಆರೋಪಿಗಳು ಇದ್ದಾರೆ

ಶಿವಮೊಗ್ಗ: ಹಂದಿ ಅಣ್ಣಿ ಕೊಲೆ ಆರೋಪಿಗಳನ್ನು ಚಿಕ್ಕಮಗಳೂರಿನಿಂದ ಶರಣಾಗತಿಯಾದ 8 ಆರೋಪಿಗಳನ್ನು ತನಿಖಾ ತಂಡ ಶಿವಮೊಗ್ಗಕ್ಕೆ ನಿನ್ನೆ ದಿವಸ  8 ಜನ ಆರೋಪಿಗಳನ್ನು ಕರೆತಂದಿದೆ. ಹಂದಿ ಅಣ್ಣಿ ಕೊಲೆ ಮಾಡಿ ಶರಣಾಗತಿಯಾದ  ಆರೋಪಿಗಳ ಪೋಟೋ ಇದೀಗ ವ್ಯಾಟ್ಸಪ್ ನಲ್ಲಿ ವೈರಲ್ ಆಗಿದೆ. ಪೊಲೀಸರ ತನಿಖೆಯಿಂದ ಕೊಲೆ ಮಾಡಿದ ನಿಜವಾದ ಆರೋಪಿಗಳು ಯಾರು ಎಂಬುದು ತಿಳಿದು ಬರಬೇಕಾಗಿದೆ.

ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಶಿವಮೊಗ್ಗಕ್ಕೆ ಕರೆತರಲಾಗದೆ. ಎಸ್​ಪಿ ಲಕ್ಷ್ಮೀಪ್ರಸಾದ್ ಈ ಮೊದಲೇ ಹೇಳಿದಂತೆ ಎರಡು ತನಿಖಾ ತಂಡಗಳು ಆರೋಪಿಗಳನ್ನು ಕರೆತರಲು ಚಿಕ್ಕಮಗಳೂರಿಗೆ ತೆರಳಿತ್ತು.

 ವಶಕ್ಕೆ ಪಡೆದ ಶಿವಮೊಗ್ಗ ಪೊಲೀಸರು ಇದೀಗ ಆರೋಪಿಗಳನ್ನು ಜಯನಗರ ಪೊಲೀಸ್ ಠಾಣೆಯಲ್ಲಿ ಇರಿಸಿದ್ದಾರೆ. ಈ ಮಧ್ಯೆ ಆರೋಪಿಗಳನ್ನ ವಶಕ್ಕೆ ಪಡೆದ ಬೆನ್ನಲ್ಲೆ, ಜಯನಗರ ಠಾಣೆಗೆ ಡಿವೈಎಸ್​ಪಿ ಬಾಲ್​ರಾಜ್​, ಅಡಿಶನಲ್​ ಎಸ್​ಪಿ ವಿಕ್ರಂ ಆಮ್ಟೆ ಹಾಗೂ ಕೊನೆಯಲ್ಲಿ ಎಸ್​ಪಿ ಲಕ್ಷ್ಮೀಪ್ರಸಾದ್​ ರವರು ಜಯನಗರ ಠಾಣೆಗೆ ಬೇಟಿ ನೀಡಿದ್ದಾರೆ.

ಇನ್ನೂ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಎಸ್​ಪಿ ಲಕ್ಷ್ಮೀಪ್ರಸಾದ್​ ಚಿಕ್ಕಮಗಳೂರಿನಲ್ಲಿ ಶರಣಾಗತಿ ದಾಖಲಾತಿ ಮುಗಿದಿದ್ದು, ಕೋರ್ಟ್​ಗೆ ಪ್ರೊಡ್ಯೂಸ್ ಮಾಡಲಾಗಿತ್ತು. ಅದಾದ ಬಳಿಕ ಅಲ್ಲಿ ಅವರ ವಿರುದ್ಧ ಯಾವುದೇ ಕೇಸ್​ಗಳಿಲ್ಲದ ಕಾರಣಕ್ಕೆ ಶಿವಮೊಗ್ಗ ಪೊಲೀಸ್ ಇಲಾಖೆ ಅವರನ್ನು ವಶಕ್ಕೆ ಪಡೆದುಕೊಂಡು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದೆ. ಸದ್ಯ ಅವರನ್ನು ಬಂಧನ ಮಾಡಲಾಗುತ್ತದೆ.

24 ಗಂಟೆಯಲ್ಲಿ ಅವರನ್ನು ಬಂಧಿಸಿ ಕೋರ್ಟ್​ಗೆ ನಾಳೆ ಪ್ರೊಡ್ಯೂಸ್ ಮಾಡಲಾಗುವುದು. ಆನಂತರ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.