29ರಂದು ಮುದ್ದಿನ ಅಪ್ಪ ಬಸವಣ್ಯಪ್ಪ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭ

ಶಿವಮೊಗ್ಗ: ಮುದ್ದಿನ ಅಪ್ಪ ಬಸವಣ್ಯಪ್ಪ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭ 29ರಂದು ಬೆಳಗ್ಗೆ 11 ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ.

 ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಹರಿಹರ ತಾಲೂಕು ಶ್ರೀ ನಂದಿಗುಡಿ ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
 ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಕ್ಕಳ ಸಾಹಿತಿ ಜೀನಹಳ್ಳಿ ಸಿದ್ಧಲಿಂಗಪ್ಪ ಪುಸ್ತಕ ಪರಿಚಯ ಮಾಡಿಕೊಡುವರು. ಲೇಖಕ ಹಾಗೂ ವೈದ್ಯರಾದ ಡಾ. ಭರತರಾಜ್ ಉಪಸ್ಥಿತರಿರುವರು. 
ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಿ.ಬಿ. ಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಡಿ. ಈಶ್ವರಪ್ಪ, ಕೆ. ಬಸವರಾಜಪ್ಪ, ಜುಂಜಪ್ಪ ಹೆಗ್ಗಪ್ಪ ನವರು, ಗೌರಮ್ಮ ನಿಗ್ಗುಡಗಿ ಜಯಶೀಲ ಷಡಕ್ಷರಪ್ಪ, ಪಾರ್ವತಮ್ಮ ಮರಿಲಿಂಗಪ್ಪ ಲಿಂಗಮ್ಮ ತೀರ್ಥಪ್ಪ, ತೀರ್ಥಪ್ಪ ಎಂ. ಅವರನ್ನು ಸನ್ಮಾನಿಸಲಾಗುವುದು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.