ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ

ಶಿವಮೊಗ್ಗ: ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗಾಗಲೇ ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ನಗರದಲ್ಲಿ ಈಗಾಗಲೇ 144 ಸೆಕ್ಷನ್ ಜಾರಿಯಲ್ಲಿದೆ. ಅಲ್ಲದೇ ಮೂರುಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಇರುವುದರಿಂದ ಬಂದ್ ವಾತಾವರಣ ಸಹಜವಾಗಿಯೇ ಇದೆ. ಭಾರತ್ ಬಂದ್‌ಗೂ ಈಗಿರುವ ಶಿವಮೊಗ್ಗದ ಸಹಜ ಬಂದ್ ಸೇರಿಕೊಂಡು ಬಂದ್ ಎಂಬುದು ಒಂದು ನೀರಸವಾಗಿದ್ದು, ಕೆಲವು ಬಡಾವಣೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಎಂದಿನಂತೆ ವ್ಯಾಪಾರ, ವಹಿವಾಟು ನಡೆದುದು ಕಂಡುಬಂದಿತ್ತು. 



ಗಾಂಧಿಬಜಾರ್, ನೆಹರೂ ರಸ್ತೆ, ಬಿ.ಹೆಚ್.ರಸ್ತೆ,. ಬಸ್‌ಸ್ಟ್ಯಾಂಡ್ ಸುತ್ತಮುತ್ತ ಗಾಂಧಿಬಜಾರ್‌ಗೆ ಸೇರಿಕೊಂಡ ರಸ್ತೆಗಳ ಅಂಗಡಿಗಳು  ಬಂದ್ ಆಗಿದ್ದವು. ಆದರೆ ಅದನ್ನು ಹೊರತುಪಡಿಸಿದರೆ ಶಿವಮೊಗ್ಗದ ಎಲ್ಲ ಕಡೆಗಳಲ್ಲಿ ಎಂದಿನಂತೆ ಜನಸಂದಣಿ ಇತ್ತು. ಹೊೇಲ್‌ಗಳು, ಅಂಗಡಿಗಳು, ಸರ್ಕಾರಿ ಕಚೇರಿ, ಆಸ್ಪತ್ರೆಗಳು, ಔಷಧಿ, ಹಾಲಿನ ಅಂಗಡಿಗಳು,ಸಣ್ಣ ಪುಟ್ಟ ಟೀ ಅಂಗಡಿಗಳು ಯಾವ ಬಂದ್‌ನ ಭಯವಿಲ್ಲದೇ ವ್ಯಾಪಾರ ಮಾಡುತ್ತಿರುವುದು ಕಂಡುಬಂದಿತ್ತು. ಜನಸಂಚಾರ ವಿರಳವಾಗಿತ್ತು ಎನ್ನಬಹುದು. 

ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ಸಂಚಾರ ಎಂದಿನಂತೆ ಇದ್ದರೂ ಕೂಡ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಪ್ರಗತಿಪರ ಸಂಘಟನೆ ಮತ್ತು ಎನ್‌ಎಸ್‌ಯುಐ ಸಂಘಟನೆಗಳು ಕೆಲವು ರೈತ  ಮುಖಂಡರನ್ನು ಬಿಟ್ಟರೆ ಮತ್ಯಾವ ಸಂಘಟನೆಗಳು ಬಂದ್‌ನಲ್ಲಿ ಭಾಗವಹಿಸಿದ್ದುದು ಕಂಡುಬರಲಿಲ್ಲ. ಪೊಲೀಸರು ಗಸ್ತು ವಾಹನದ ಮೂಲಕ 144 ಸೆಕ್ಷನ್ ಬಗ್ಗೆ ಧ್ವನಿವರ್ಧಕದ ಮೂಲಕ ಎಚ್ಚರಿಸುತ್ತಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರು. 


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.