ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಕಾರ್ಪೊರೇಟ್ ರ್ ಗಳಿಂದ ಗಾಂಧೀಪಾರ್ಕ್ ಫುಲ್ ಕ್ಲೀನ್..

ಶಿವಮೊಗ್ಗ; ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಕೋವಿಡ್-19 ಹಿನ್ನೆಲೆಯಲ್ಲಿ ಗಾಂದಿ ಪಾರ್ಕ್ ಆವರಣವನ್ನು ಇಂದು ಸಂಪೂರ್ಣ ಸ್ವಚ್ಚಗೋಳಿಸಲಾಯಿತು.

ಇಂದಿನ ಸ್ವಚ್ಚತಾ ಕಾರ್ಯದಲ್ಲಿ ಮಹಾನಗರ ಪಾಲಿಕೆಯ ಎಲ್ಲಾ 35 ಕಾರ್ಪೊರೇಟ್ ರ್ಗಳು, ಆರೋಗ್ಯ ಇಲಾಖೆಯ ಇನ್ಸ್ ಪೆಕ್ಟರ್, ಸ್ವಚ್ಚತಾ ಸಿಬ್ಬಂದಿ, ಮತ್ತು ಅಧಿಕಾರಿಗಳು, ಜನಪ್ರತಿನಿಧಿಗಳು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದು ವಿಶೇಷ ವಾಗಿತ್ತು. 
ಕೋವಿಡ್19 ಹಿನ್ನೆಲೆಯಲ್ಲಿ ಮಾಸ್ಕ್ ಇನ್ನಿತರೆ ಕಸದ ವಸ್ತುಗಳು ಗಾಂಧೀಪಾರ್ಕನಲ್ಲಿ  ಕಂಡುಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ  ಕೊರಾನ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಾಂಧೀಪಾಕರ್ಕ್ನ ಆವರಣವನ್ನು ಸಂಪೂರ್ಣ ವಾಗಿ ಸ್ವಚ್ಚತಾ ಕಾರ್ಯಕ್ರಮ ಮಾಡಿ ಶುಚಿಗೋಳಿಸಿದ್ದಾರೆ.

ಪಾಲಿಕೆಯ ಸಿಬ್ಬಂದಿ ಮತ್ತು ಕಾರ್ಪೊರೇಟ್ ರಗಳ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯಲ್ಲಿ ಎಲ್ಲಾ ಪಾರ್ಕ್ ಗಳ ಸ್ವಚ್ಚತಾ ಕಾರ್ಯ ನಡೆಯುವಂತಾಗಲೀ ಎಂಬುದು ಸಾರ್ವಜನಿಕ ರ ಆಶಯವಾಗಿರುತ್ತದೆ.
.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.