ಶಿವಮೊಗ್ಗ ದಲ್ಲಿ ನಿರ್ದೇಶಕ ಡಾ. ಪ್ರದೀಪ್ ಮನೆ ಮೇಲೆ ಲೋಕಾಯುಕ್ತ ದಾಳಿ!!

ಶಿವಮೊಗ್ಗ:  ಶಿವಮೊಗ್ಗದಲ್ಲಿ ಲೋಕಾಯುಕ್ತ ಪೊಲೀಸರು ಇಂದು ಬೆಳಿಗ್ಗೆ ದಾಳಿ ಮಾಡಿದ್ದಾರೆ ಸಂಶೋಧನಾ ನಿರ್ದೇಶಕ ಡಾ. ಎಸ್. ಪ್ರದೀಪ್ ಮನೆ ಮೇಲೆ ಲೋಕಾ ರೇಡ್ ಆಗಿದೆ.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿದ್ಯಾಲಯದಲ್ಲಿ ಸಾವಯವ ಕೃಷಿ ಸಂಶೋಧನೆ ನಿರ್ದೇಶಕ ಡಾ. ಪ್ರದೀಪ್ ಅಕ್ರಮ ಆಸ್ತಿ ಹೊಂದಿದ್ದಾರೆಂಬ ದೂರಿನ ಮೇರೆಗೆ ದಾಳಿ ಮಾಡಲಾಗಿದೆ.

ಎಸ್.ಪಿ. ಮಂಜುನಾಥ್ ಚೌಧರಿ ಹಾಗೂ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ಆಗಿದೆ.

ಶಿವಮೊಗ್ಗ ಪ್ರಿಯದರ್ಶಿನಿ ಬಡಾವಣೆಯಲ್ಲಿ ಮನೆ, ಶಿಕಾರಿಪುರ ಭದ್ರಾಪುರದ ಫಾರ್ಮ್ ಹೌಸ್ ಮೇಲೆ  ಮತ್ತು ಹೊಸನಗರದ ಕೆರೆಹಳ್ಳಿಯ ಬಾಳೆಶೆಟ್ಟಿಕೊಪ್ಪದ ಮನೆ ಮೇಲೂ ರೇಡ್ ಆಗಿದೆ.

   ಅಕ್ರಮ ಆಸ್ತಿ ಸೇರಿದಂತೆ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳ ತಂಡ,ಮೂರು ಮನೆಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.

ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪದ ಮೇಲೆ ದಾಳಿ ಆಗಿದೆ.ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.