ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ದಿಡೀರ್ ವರ್ಗಾವಣೆ!!ಮಾಯಣ್ಣ ಗೌಡ ನೇಮಕ

ಬೆಂಗಳೂರು:ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಕೆ.ಎ.ಎಸ್.ಇವರನ್ನು  ವರ್ಗಾವಣೆಯನ್ನು ಮಾಡಿ ಸರ್ಕಾರದ ಆದೇಶ ಹೊರಬಿದ್ದಿದೆ..
ಕರ್ನಾಟಕ ಪೌರಾಡಳಿತ ಸೇವೆಯ ಶ್ರೀ ಕೆ. ಮಾಯಣ್ಣಗೌಡ, ಪೌರಾಯುಕ್ತರು ಆಯ್ಕೆ
ಶ್ರೇಣಿ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿಮಂಡ್ಯ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ
ಹಿತದೃಷ್ಟಿಯಿಂದ 02 ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಆಯುಕ್ತರು,ಶಿವಮೊಗ್ಗ ಮಹಾನಗರ ಪಾಲಿಕೆ ಡಾ. ಕವಿತಾ ಯೋಗಪ್ಪನವರ್, ಕೆ.ಎ.ಎಸ್. ಇವರ ಜಾಗಕ್ಕೆ
ವರ್ಗಾಯಿಸಿ ಆದೇಶಿಸಿದೆ.

ಮುಂದುವರೆದು, ಡಾ. ಕವಿತಾ ಯೋಗಪ್ಪನವರ್, ಕೆ.ಎ.ಎಸ್.ಇವರು ಮುಂದಿನ ಸ್ಥಳ
ನಿಯುಕ್ತಿಗಾಗಿ ಸಕ್ಷಮ ಪ್ರಾಧಿಕಾರದಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಇವರಿಗೆ ಜಾಗ ಸಹ ನಿಯುಕ್ತಿ ಮಾಡಿಲ್ಲ.

ಇತ್ತಿಚೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ರವರ ಆಡಳಿತ ವೈಖರಿ ಬಗ್ಗೆ ಹಲವು ಚರ್ಚೆಗಳು ಆಗಿದ್ದವು.ಇದೀಗ ಈ ಹಿಂದೇ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದ  ಮಾಯಣ್ಣಗೌಡ ಇವರನ್ನು ನೇಮಕ ಮಾಡಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.