ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಹೊಸಮನೆಯಲ್ಲಿ ಪ್ರತ್ಯಕ್ಷ! ಏನಿರಬಹುದು ಅಂತೀರಾ ನೋಡಿ...
ಶಿವಮೊಗ್ಗ: ಶುಕ್ರವಾರ ಬೆಳ್ಳಂಬೆಳಿಗ್ಗೆ ಶಿವಮೊಗ್ಗದ ವಾರ್ತಾಧಿಕಾರಿ ಮಾರುತಿ ಸರ್ಕಾರದ ವಾಹನ ಏರಿ ಎಲ್ಲಿಗೆ ಹೋಗಿದ್ರು ಎಂಬ ಬಗ್ಗೆ ಪತ್ರಕರ್ತರ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಶುಕ್ರವಾರ ಬೆಳಿಗ್ಗೆ ಸುಮಾರು 9-30 ಗಂಟೆ ಸಮಯದಲ್ಲಿ ಶಿವಮೊಗ್ಗ ನಗರದ ಹೊಸಮನೆಯಲ್ಲಿ ವಾರ್ತಾ ಇಲಾಖೆಯ ಸರ್ಕಾರದ ವಾಹನದೊಂಧಿಗೆ ಪ್ರತ್ಯಕ್ಷವಾಗಿದ್ದು, ಯಾರೋ ಜೋತೆ ತುರ್ತು ಚರ್ಚಿಸಲು ಮನೆಗೆ ಇವರೇ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಅಂತಹ ತುರ್ತು ಅಗತ್ಯ ಏನಿತ್ತು ಎಂಬುದು ನಿಗೂಡವಾಗಿದೆ.
ವಾರ್ತಾಧಿಕಾರಿ ಮತ್ತು ಪತ್ರಕರ್ತರೊಬ್ಬರ ನಡುವೆ ನಡೆದ ಅತೀ ಗುಪ್ತವಾದ ಮಾತುಕತೆ ಅಂತದ್ದು ಏನಿರಬಹುದು? ಶಿವಮೊಗ್ಗದ ಪತ್ರಿಕೋದ್ಯಮದಲ್ಲಿ ಈ ಮಾತುಕತೆ ಸಂಚಲನ ಉಂಟುಮಾಡಿದೆ.
.ಶಿವಮೊಗ್ಗದಲ್ಲಿ RTO ರಸ್ತೆಯಲ್ಲಿರುವ ಸರ್ಕಾರಿ ಪತ್ರಿಕಾ ಭವನದ ಸಂಬಂಧ ನಿವೃತ್ತ ನ್ಯಾಯಾಧೀಶರು ತನಿಖೆ ನಡೆಸುತ್ತಿರುವ ಸಂದರ್ಭದಲ್ಲೇ ವಾರ್ತಾಧಿಕಾರಿ ಮಾರುತಿ ಹೊಸಮನೆ ಬಡಾವಣೆಯಲ್ಲಿರುವ ಸಂಪಾದಕ- ಪತ್ರಕರ್ತರೊಬ್ಬರ ಮನೆಗೆ ಸರ್ಕಾರಿ ವಾಹನದಲ್ಲೇ ತೆರಳಿ ಗಂಭೀರ ಚರ್ಚೆ ನಡೆಸಿದ್ದಾರೆ.
ಸುಮಾರು ಅರ್ಧ ತಾಸು ಈ ಮಾತುಕತೆ ನಡೆದಿದೆ ಎನ್ನಲಾಗಿದೆ.
ಶಿವಮೊಗ್ಗದ ಪತ್ರಿಕೋದ್ಯಮದಲ್ಲಿ ಮತ್ತು ವಾರ್ತಾ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಈ ಇಬ್ಬರೂ ಚರ್ಚೆ ನಡೆಸಿ, ಸಿದ್ಧಪಡಿಸಿರುವ ರೂಪುರೇಷೆ ಗಳು ಏನು ಎಂಬುದು ಗೊತ್ತಾಗ ಬೇಕಾಗಿದೆ.
ಈ ಬಗ್ಗೆ ವಾರ್ತಾ ಇಲಾಖೆಯ ಸರ್ಕಾರಿ ವಾಹನದಲ್ಲಿ ತೆರಳಿದ ಬಗ್ಗೆ ಪೋಟೋ ಹಲೋ ಶಿವಮೊಗ್ಗ ಪತ್ರಿಕೆಗೆ ಲಭ್ಯವಾಗಿದೆ.ಮೇಲಿನ ಪೋಟೋ ನೋಡಿ
ಶಿವಮೊಗ್ಗದ ವಾರ್ತಾ ಇಲಾಖೆಯ ಕಚೇರಿಯಲ್ಲಿ 15 ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿರುವ ಆರ್. ಮಾರುತಿ ಶುಕ್ರವಾರ ಸರ್ಕಾರಿ ವಾಹನದಲ್ಲೇ ತೆರಳಿ ತುರ್ತು ಚರ್ಚೆ ನಡೆಸಿದ್ದು ಏನು ಎಂಬ ಬಗ್ಗೆ ಅವರೇ ಹೇಳಬೇಕು....
Leave a Comment