ನಿಮ್ಮ ಬದುಕಿನಲ್ಲಿ ನಿಶ್ಚಿತವಾದ ಗುರಿಯನ್ನು ಇರಿಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ:ಡಾ. ಎಂ.ಕೆ ವೆಂಕಟೇಶ

ಶಿವಮೊಗ್ಗದ ಪಿಇಎಸ್ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಯಲ್ಲಿ ೧೫ನೇ ಪದವಿ ಸಮಾರಂಭ
ಶಿವಮೊಗ್ಗ:  ಪದವಿಯನ್ನು ಪಡೆದುಕೊಳ್ಳುವ ಹೊಸ್ತಿಲಲ್ಲಿರುವ ನೀವುಗಳು ನಿರಂತರವಾಗಿ ಬದುಕಿನಲ್ಲಿ ಕಲಿಕೆಯನ್ನು ರೂಢಿಸಿಕೊಳ್ಳಬೇಕು ಹಾಗೂ ನಿಮ್ಮ 
ಜ್ಞಾನದ ವಲಯವನ್ನು ವಿಸ್ತರಿಸಿಕೊಳ್ಳಬೇಕು.ನಿಮ್ಮ ಬದುಕಿನಲ್ಲಿ ನಿಶ್ಚಿತವಾದ ಗುರಿಯನ್ನು ಇರಿಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಖಓS ತಾಂತ್ರಿಕ ಸಂಸ್ಥೆ ಬೆಂಗಳೂರು ಇದರ ನಿರ್ದೇಶಕರಾದ ಡಾ. ಎಂ.ಕೆ ವೆಂಕಟೇಶ ಅವರು ಪದವಿ ಸಮಾರಂಭದಲ್ಲಿ 
ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮಾರಂಭವನ್ನು ಉದ್ದೇಶಿಸಿ ನುಡಿದರು.

ಪದವಿ ಎನ್ನುವುದು ಕೇವಲ ವಿದ್ಯಾರ್ಹತೆ ಅಲ್ಲ ಇದೊಂದು ಜವಾಬ್ದಾರಿ ಆಗಿದೆ. ಮತ್ತು 
ಯಾವುದೇ ಕೆಲಸವನ್ನು ಕಷ್ಟಪಟ್ಟುಮಾಡುವುದಕ್ಕಿಂತ ಇಷ್ಟಪಟ್ಟು ಮಾಡಿ ಎಂದಿಗೂ ಎದೆಗುಂದಬೇಡಿ ಮತ್ತು  ಪ್ರಾಮಾಣಿಕತೆ, ಸತ್ಯ, ಸಮಯ ಪರಿಪಾಲನೆ, ಮಾನವೀಯತೆ, 
ಮುಂತಾದವುಗಳನ್ನು ರೂಢಿಸಿಕೊಳ್ಳಿ. ಹಾಗೆಯೇ ನಿಮ್ಮ ಬದುಕಿನಲ್ಲಿ ಮುಂದೆ ಗುರಿ ಹಾಗೂ ಹಿಂದೆ ಗುರುವನ್ನು ಇರಿಸಿಕೊಂಡಲ್ಲಿ 
ಉನ್ನತವಾದ ಸಾಧನೆಯನ್ನು ಮಾಡಲು ಸಾಧ್ಯ. ಹಾಗೆಯೇ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಸಕಾರಾತ್ಮಕವಾಗಿ 
ಯೋಚಿಸಿ ಎಂದರು.
 
ಪಿಇಎಸ್ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆ(ಪಿಇಎಸ್‌ಐಟಿಎಮ್) ಶಿವಮೊಗ್ಗ ಇದರ ೧೫ನೇ ಪದವಿ ಪ್ರದಾನ ಸಮಾರಂಭ ಮೇ ೩೧, 
೨೦೨೫ ರಂದು ವಿಜೃಂಭಣೆಯಿAದ ಆಚರಿಸಲಾಯಿತು. ಸಮಾರಂಭವು ಸಂಸ್ಥೆಯ ಶೈಕ್ಷಣಿಕ ಸಾಧನೆಗಳನ್ನು ಎತ್ತಿ ಹಿಡಿದಿದ್ದು, ವಿದ್ಯಾರ್ಥಿಗಳ 
ಪ್ರಯತ್ನ, ಸಮರ್ಪಣೆ ಮತ್ತು ಯಶಸ್ಸಿಗೆ ಗೌರವ ಸಲ್ಲಿಸಲಾಯಿತು. ಈ ವಿಶೇಷ ದಿನವು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅಂತ್ಯವಲ್ಲದೆ 
ಹೊಸಜೀವನದ ಆರಂಭವನ್ನು ಸಂಕೇತಿಸಿತು.
ಈ ಬಾರಿಯ ಸಮಾರಂಭದಲ್ಲಿವಿವಿಧ ಶಾಖೆಗಳ ವಿದ್ಯಾರ್ಥಿಗಳಲ್ಲಿ ೬೫೦ಕ್ಕೂ ಹೆಚ್ಚು ಸ್ನಾತಕ ಪದವಿ, ೧೨೦ ಸ್ನಾತಕೋತ್ತರ ಪದವಿ ಮತ್ತು ೨ ಪಿಎಚ್‌ಡಿ ವಿದ್ಯಾರ್ಥಿಗಳು ಪದವಿಗಳನ್ನು ಪಡೆದರು. ಈ ಸಾಧನೆ ಪಿಇಎಸ್‌ಐಟಿಎಮ್ ಸಂಸ್ಥೆಯ ಶೈಕ್ಷಣಿಕ ನಿಷ್ಠೆ ಮತ್ತು ಗುಣಮಟ್ಟದ 
ಸಂಶೋಧನೆ ಮತ್ತು ಸಾಮಾಜಿಕ ಸೇವೆಗಳತ್ತ ಸಂಬAಧಿತ ದೃಷ್ಠಿಕೋನವನ್ನು ಪ್ರಾಮಾಣಿಕವಾಗಿ ಪ್ರತಿಬಿಂಬಿಸುತ್ತಿದೆ.
ಸಮಾರAಭವು ಬೆಳಿಗ್ಗೆ ೧೦:೩೦ಕ್ಕೆ ಪ್ರೊಸೆಷನ್ ಮೂಲಕ ಆಗಮಿಸಿದ ನಂತರ ಕರ್ನಾಟಕ ನಾಡಗೀತೆ ಗಾಯನದೊಂದಿಗೆ ಆರಂಭವಾಯಿತು. 

ವೇದಿಕೆಯಲ್ಲಿ ಅತಿಥಿಗಳು ದೀಪ ಪ್ರಜ್ವಲಿಸಿ ಜ್ಞಾನ ಮತ್ತು ವಿದ್ಯೆಯ ಪ್ರತೀಕವಾದ ಬೆಳಕನ್ನು ಹರಡಿದರು.

ಡಾ. ಆರ್ ಸೇಕರ್, ಪಿಇಎಸ್‌ಐಟಿಎಮ್‌ನ ಉಪಪ್ರಾಚಾÀರ್ಯರು, ಆತ್ಮೀಯ ಸ್ವಾಗತ ಭಾಷಣ ನೀಡಿದರೆ, ಡಾ. ಆರ್ ನಾಗರಾಜ್, 
ಪಿಇಎಸ್ ಟ್ರಸ್ಟ್ (ರಿ) ನ ಮುಖ್ಯ ಸಂಯೋಜಕರು, ಕಳೆದ ಶೈಕ್ಷಣಿಕ ವರ್ಷದ ಸಾಧನೆಗಳನ್ನು ವಿವರಿಸಿ ಪದವಿ ದಿನದ ವರದಿ ವಾಚಿಸಿದರು.

ಸಂಸ್ಥೆಯ ಅಇಔ ಹಾಗೂ ಪಿಇಎಸ್ ಟ್ರಸ್ಟ್ ನಿರ್ದೇಶಕಿ ಶ್ರೀಮತಿ ಉಮಾದೇವಿ ಎಸ್ ವೈ ಅವರು ಅಧಿಕೃತವಾಗಿ ಪದವಿ ಸಮಾರಂಭವನ್ನು 
ಘೋಷಿಸಿದರು.

 ೩೨ ವರ್ಷಗಳ ಸಾಧನೆ ಮತ್ತು ವಿಶಿಷ್ಟ ಸಂಘಟನಾ ನೀತಿಗಳೊಂದಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಯಶಸ್ವಿಯಾಗಿ 
ನಿರ್ವಹಿಸುತ್ತಿರುವ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಯಶಸ್ಸಿನಲ್ಲಿ ನಿಮ್ಮೆಲ್ಲರ ಪಾತ್ರವು ಇದೆ. ನೀವು ಪದವಿಯ
ನಂತರದಲ್ಲಿ ನಿಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ವಿವಿಧ ಕ್ಷೇತ್ರಗಳಲ್ಲಿ ಉನ್ನತವಾದ ಕೊಡುಗೆಗಳನ್ನು ಸಮಾಜಕ್ಕೆ ನೀಡುವುದರ ಮೂಲಕ 
ಕೊಡುಗೆಗಳನ್ನು ನೀಡಿ ಎಂದರು. ವಿದ್ಯಾರ್ಥಿಗಳ ಜ್ಞಾನವನ್ನು ಸಮಾಜದ ಕಲ್ಯಾಣಕ್ಕೆ ಬಳಸಲು ಪ್ರೆರೇಪಿಸಿದರು.

ಪದವೀಧರರ ಪರವಾಗಿ ಡಾ. ಲೈಕ್ವಿನ್ ಥಾಮಸ್ ಭಾವಪೂರ್ಣ ಧನ್ಯವಾದದ ಭಾಷಣ ನೀಡಿ ಶಿಕ್ಷಕರು, ಕುಟುಂಬ, ಸ್ನೇಹಿತರು ಹಾಗೂ 
ಪಿಇಎಸ್‌ಐಟಿಎಮ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಡಾ. ಪ್ರಸನ್ನ ಕುಮಾರ್ ಎಚ್ ಆರ್, ಅಕಾಡೆಮಿಕ್ ಡೀನ್ ಮತ್ತು ISಇ ವಿಭಾಗದ ಮುಖ್ಯಸ್ಥರು, ಧನ್ಯವಾದ ಅರ್ಪಣೆಯ ಮೂಲಕ 
ಸಮಾರಂಭದಲ್ಲಿ ವಂದನೆಗಳನ್ನು ಸಲ್ಲಿಸಿದರು.

ಸಮಾರಂಭದಲ್ಲಿ ಶ್ರೀಮತಿ ಪದ್ಮಾವತಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪೋಷಕರು ಕೂಡ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.