ಸಿ.ಪಿ.ಐ ನಂಜಪ್ಪ ಇನ್ನಿಲ್ಲ

ಶಿವಮೊಗ್ಗ: ಶಿವಮೊಗ್ಗ ಕಾಶಿಪುರ  ವಾಸಿಯಾದ ಸಾಧುಶೆಟ್ಟಿ ಜನಾಂಗದ ಸಿ.ಪಿ.ಐ ನಂಜಪ್ಪ ನಿನ್ನೆ ರಾತ್ರಿ ಕುಂದಾಪುರದಲ್ಲಿ ನಿಧನರಾಗಿದ್ದಾರೆ.ಮೃತರು ಅನಾರೋಗ್ಯದ ನಿಮಿತ್ತ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.

 ಮೃತರು ಕುಂದಾಪುರದಲ್ಲಿ ಸಿ.ಪಿ.ಐ ಆಗಿ  ಕೆಲಸ ಮಾಡುತ್ತಿದ್ದರು. ಇವರು ಪಿ.ಸಿ.ಅಗಿ ಇಲಾಖೆಗೆ ಸೇರಿ ನಂತರ PSI ಪರೀಕ್ಷೆ ಬರೆದು  ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕವಾಗಿ ಕೆಲಸ ಮಾಡಿ ನಂತರ ಸಿ.ಪಿ.ಐ ಆಗಿ ಪದೋನ್ನತಿ ಹೊಂದಿ ಕೆಲಸ ಮಾಡುತ್ತಿದ್ದರು.

ಇವರು ಶಿವಮೊಗ್ಗದಲ್ಲಿ ಪಿ.ಸಿಯಾಗಿ ಕೆಲಸ ಮಾಡುವ ಸಂದರ್ಭದಲ್ಲಿ ನಾನು ಇವರ ಜೊತೆಯಲ್ಲಿ ಕೆಲಸ ಮಾಡಿದ್ದೆನೆ. ಬಹಳ ಒಳ್ಳೆಯ ವ್ಯಕ್ತಿ, ತುಂಬಾ ಆತ್ಮಿಯತೇ ಇವರಲ್ಲಿ ಇತ್ತು, ನೋಡುವುದಕ್ಕೆ ದಪ್ಪನೆಯ ಮೈಕಟ್ಟು, ಕ್ರಿಮಿನಲ್ ಗಳು ಇವರನ್ನು ನೋಡಿದರೆ ಭಯಪಡುತ್ತಿದ್ದರು. ಇವರು ಮೃತಪಟ್ಟಿರುವ ವಿಷಯ ಕೇಳಿ ಬೇಸರವಾಯಿತು. ಇವರ ಜೊತೆಯಲ್ಲಿ ಕೆಲಸ ಮಾಡಿದ ಹಲವಾರು ಪೊಲೀಸ್  ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.

ಮೃತ ಸಿ.ಪಿ.ಐ ನಂಜಪ್ಪ ಇವರ ಆತ್ಮಕ್ಕೆ ಚಿರಶಾಂತಿ ಸೀಗಲೀ, ಮೃತರ ಕುಟುಂಬದವರಿಗೆ  ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೀ ಎಂದು ಪ್ರಾರ್ಥಿಸುತ್ತೆನೆ.

ಮೃತರಿಗೆ ಇಬ್ಬರು ಮಕ್ಕಳನ್ನು ಮತ್ತು ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ. ಇವರ  ಪತ್ನಿ ಈಗಾಗಲೇ ತೀರಿಕೊಂಡಿರುತ್ತಾರೆ. ಸಾಧುಶೆಟ್ಟಿ ಜನಾಂಗದ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಮೃತದೇಹವನ್ನು ಇಂದು ಬೆಳಿಗ್ಗೆ ಪೊಲೀಸ್ ಇಲಾಖೆಯಲ್ಲಿ   ಸಕಲ ಗೌರವಗಳನ್ನು ಸಲ್ಲಿಸಿದ ನಂತರ ಶಿವಮೊಗ್ಗಕ್ಕೆ ತರಲಿದ್ದು, ಇಂದು ಸಂಜೆ ಶಿವಮೊಗ್ಗಕ್ಕೆ ಬರಲಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಮೃತರ ಮನೆ ಕಾಶಿಪುರದಲ್ಲಿ ಇದ್ದು ಅಲ್ಲಿಗೆ ಮೃತದೇಹವನ್ನು ತರಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ. ಅಂತ್ಯಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.