ಶಿವಮೊಗ್ಗ : *ಬಲೂನ್ ಗಳನ್ನು ಹಾರಿಸಿ* ಮ್ಯಾರಥಾನ್ ಓಟಕ್ಕೆ ಚಾಲನೆ
, *ಶ್ರೀ ಚನ್ನಬಸಪ್ಪ* ಮಾನ್ಯ ಶಾಸಕರು, ಶಿವಮೊಗ್ಗ ವಿಧಾನಸಭಾ ಕ್ಷೇತ್ರ, *ಡಾ|| ಧನಂಜಯ್ ಸರ್ಜಿ* ಎಂ.ಎಲ್.ಸಿ, ನೈರುತ್ಯ ಪದವೀಧರ ಕ್ಷೇತ್ರ, *ಶ್ರೀ ಹೇಮಂತ್, ಐಎಎಸ್* ಸಿಇಓ, ಜಿಲ್ಲಾ ಪಂಚಾಯತ್, ಶಿವಮೊಗ್ಗ, *ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು *ಬಲೂನ್ ಗಳನ್ನು ಹಾರಿಸಿ* ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು. 
ಮ್ಯಾರಥಾನ್ ಓಟವನ್ನು *ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ* ಪ್ರಾರಂಭಿಸಿ, ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘ ವೃತ್ತ, ಡಿವಿಎಸ್ ವೃತ್ತ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐಬಿ ವೃತ್ತದ ಮುಖಾಂತರ ಡಿಎಆರ್ ಪೊಲೀಸ್ ಕವಾಯತು ಮೈದಾನಕ್ಕೆ ಬಂದು *ಮುಕ್ತಾಯ ಮಾಡಲಾಯಿತು.*
*10K ವಿಭಾಗದಲ್ಲಿ* ಪ್ರಥಮ ಸ್ಥಾನವನ್ನು *ಕಿರಣ್,* ದ್ವಿತೀಯ ಸ್ಥಾನವನ್ನು *ನಂದನ್* ತೃತೀಯ ಸ್ಥಾನವನ್ನು *ಭರತ್* ರವರು ಹಾಗೂ *5 K ಪುರುಷರ ವಿಭಾಗದಲ್ಲಿ* ಪ್ರಥಮ ಸ್ಥಾನವನ್ನು *ಬಾಲು* ದ್ವಿತೀಯ ಸ್ಥಾನವನ್ನು *ಧನರಾಜ್* ತೃತೀಯ ಸ್ಥಾನವನ್ನು *ಧನುಷ್* ಹಾಗೂ *5 K ಮಹಿಳೆಯರ ವಿಭಾಗದಲ್ಲಿ* ಪ್ರಥಮ ಸ್ಥಾನವನ್ನು *ಧೀಕ್ಷಾ* ದ್ವಿತೀಯ ಸ್ಥಾನವನ್ನು *ಸಾನಿಕ* ತೃತೀಯ ಸ್ಥಾನವನ್ನು *ಸೋನಿಯಾ* ರವರು ಪಡೆದರು. *ಪ್ರಥಮ ಸ್ಥಾನ* ಪಡೆದ ವಿಜೇತರಿಗೆ *ರೂ 10,000/- ನಗದು* ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು, *ದ್ವಿತೀಯ ಸ್ಥಾನ* ಪಡೆದ ವಿಜೇತರಿಗೆ *ರೂ 8,000/-* ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ಹಾಗೂ *ತೃತೀಯ ಸ್ಥಾನ* ಪಡೆದ ವಿಜೇತರಿಗೆ *ರೂ 5,000/-* ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಲಾಯಿತು
ಮ್ಯಾರಥಾನ್ ನಲ್ಲಿ ಭಾಗವಹಿಸಿ, ಪೂರ್ಣಗೊಳಿಸಿದ ಎಲ್ಲರಿಗೂ *ಪ್ರಶಂಸನಾ ಪತ್ರ* ನೀಡಲಾಯಿತು ಹಾಗೂ ಈ ಸಂದರ್ಭದಲ್ಲಿ *ವ್ಯಸನ ಮುಕ್ತ ಸಮಾಜ* ನಿರ್ಮಾಣ, *ಸೈಬರ್ ಸುರಕ್ಷತಾ* ಕ್ರಮಗಳು ಮತ್ತು *ಸಂಚಾರ ನಿಯಮಗಳ* ಕಡ್ಡಾಯ ಪಾಲನೆಯ ಕುರಿತು *ಪ್ರತಿಜ್ಞಾವಿಧಿಯನ್ನು* ಸ್ವೀಕರಿಸಲಾಯಿತು. 
ಸದರಿ ಮ್ಯಾರಥಾನ್ ನಲ್ಲಿ *ಶ್ರೀ ಯುವಕುಮಾರ್* ಕಮಾಂಡೆಂಟ್, 8ನೇ ಪಡೆ, ಮಾಚೇನಹಳ್ಳಿ, ಶಿವಮೊಗ್ಗ, *ಶ್ರೀ ಶಿವಕುಮಾರ್* ಕಮಾಂಡೆಂಟ್, 2ನೇ ಪಡೆ ಕೆ.ಎಸ್.ಐ.ಎಸ್.ಎಫ್, ಶಿವಮೊಗ್ಗ, *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 01, ಶಿವಮೊಗ್ಗ ಜಿಲ್ಲೆ, *ಶ್ರೀ ಎ ಜಿ ಕಾರಿಯಪ್ಪ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 02, ಶಿವಮೊಗ್ಗ ಜಿಲ್ಲೆ, *ಶ್ರೀ ಬಾಬು ಆಂಜನಪ್ಪ,* ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ, *ಶ್ರೀ ಸಂಜೀವ್ ಕುಮಾರ್ ಟಿ* ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, *ಶ್ರೀ ನಾಗರಾಜ್,* ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ, *ಗೋಪಾಲ ಕೃಷ್ಣ ಟಿ ನಾಯಕ್* ಪೊಲೀಸ್ ಉಪಾಧೀಕ್ಷಕರು ಸಾಗರ ಉಪ ವಿಭಾಗ, *ಶ್ರೀ ಕೃಷ್ಣ ಮೂರ್ತಿ,* ಪೊಲೀಸ್ ಉಪಾಧೀಕ್ಷಕರು, ಸಿಇಎನ್ ಕ್ರೈಂ ಪೊಲೀಸ್ ಠಾಣೆ, ಶಿವಮೊಗ್ಗ ಮತ್ತು *ಶ್ರೀ ಕೃಷ್ಣ ಮೂರ್ತಿ,* ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ, *ಶಿವಮೊಗ್ಗ ಜಿಲ್ಲಾ ಪೊಲೀಸ್* ನ ಅಧಿಕಾರಿ ಮತ್ತು ಸಿಬ್ಬಂಧಿಗಳು, *ಕೆ.ಎಸ್.ಆರ್.ಪಿ 8ನೇ* ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು, *ಕೆ.ಎಸ್.ಐ.ಎಸ್.ಎಫ್ 2ನೇ* ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಗೂ *ಯುವಜನ ಮತ್ತು ಕ್ರೀಡಾ ಇಲಾಖೆಯ* ವಿಧ್ಯಾರ್ಥಿಗಳು, ವಿವಿಧ *ಶಾಲಾ ಕಾಲೇಜುಗಳ* ವಿಧ್ಯಾರ್ಥಿಗಳು, ಶಿವಮೊಗ್ಗದ ವಿವಿಧ *ಇಲಾಖೆಗಳ* ಅಧಿಕಾರಿ ಸಿಬ್ಬಂಧಿಗಳು ಮತ್ತು *ಸಾರ್ವಜನಿಕರು* ಭಾಗವಹಿಸಿದ್ದರು.
Leave a Comment