*ನನಗೆ ಅಧಿಕಾರ ಕೊಟ್ಟ ಜನರ ಋಣ ತೀರಿಸುತ್ತೇನೆ: ಶಾಸಕ ಗೋಪಾಲಕೃಷ್ಣ ಬೇಳೂರು
ಆನಂದಪುರ :ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡುತ್ತಿರಬಹುದು ಆದರೆ ಕಡು ಬಡವರ ಮನೆಯಲ್ಲಿ ಬೆಳಕನ್ನು ತರಿಸಿದ್ದು ನಮ್ಮ ಗ್ಯಾರೆಂಟಿ ಯೋಜನೆ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇವರು ಸಮೀಪದ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 11 ಕೋಟಿಗೂ ಅಧಿಕ ಕಾಮಗಾರಿಕೆಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದರು.
ಬಿಜೆಪಿಯ ನಾಯಕರು ಕೊರೋನ ಸಮಯದಲ್ಲಿ ಜನರ ಹಣವನ್ನು ಯಾವುದೇ ಅಭಿವೃದ್ಧಿಯನ್ನು ಮಾಡದೆ ಲೂಟಿ ಮಾಡಿದರು. ಅದರಲ್ಲೂ ನಮ್ಮ ಸಾಗರ ಭಾಗದಲ್ಲಿ ಹಾಲಪ್ಪನವರು ಒಂದೇ ಒಂದು ಕಟ್ಟಡವನ್ನು ನಿರ್ಮಿಸದೆ ಅಧಿಕಾರವನ್ನು ಕೊನೆಗೊಳಿಸಿದರು ಹಾಗೆ ತಮ್ಮ ನಾಯಕರ ಮನೆಗೆ ಸೀಮಿತವಾಗಿ ರಸ್ತೆಯನ್ನು ನಿರ್ಮಿಸಿ ಕೊಟ್ಟಿದ್ದರೆ ಹೊರತು ಜನರಿಗೆ ಒಂದು ಅನುಕೂಲವಾಗುವಂತಹ ಕೆಲಸವೂ ಸಹ ಮಾಡದೆ ಹೋದರು.
ನನಗೆ 10 ವರ್ಷಗಳ ಬಳಿಕ ಅಧಿಕಾರವನ್ನು ಮತ್ತೆ ಜನತೆ ನೀಡಿದ್ದಾರೆ ಇದರ ಫಲವಾಗಿ ನಾನು ಯಾವುದೇ ಜಾತಿ ,ಧರ್ಮ ,ಕುಲವ ,ಮರೆತು ಎಲ್ಲರನ್ನೂ ಸಮಾನರಂತೆ ಕಂಡು ಎಲ್ಲರಿಗೂ ಸೌಲಭ್ಯ ದೊರೆಯುವಂತೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಕಾಗೋಡು ತಿಮ್ಮಪ್ಪನವರ ಅವಧಿಯಲ್ಲಿ ರೈತರಿಗೆ ಹಕ್ಕು ಪತ್ರಗಳನ್ನು ನೀಡಿದರು ಆದರೆ ಅವರ ಬಳಿಕ ಯಾರು ಸಹ ನೀಡಲಿಲ್ಲ ಈಗ ನಾವು ಮತ್ತೆ ರೈತರಿಗೆ ಹಕ್ಕು ಪತ್ರ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು.
ನನ್ನ ಕ್ಷೇತ್ರ ಪ್ರತಿಯೊಂದು ಗ್ರಾಮದ ಅಭಿವೃದ್ಧಿಯು ನನ್ನ ಗುರಿಯಾಗಿದೆ ಹಾಗೆ ಬಡ ಜನರಿಗೆ ಅನುಕೂಲಕರವಾಗುವಂತಹ ಅನೇಕ ಕೆಲಸ ಕಾರ್ಯಗಳನ್ನು ನಾನು ಮಾಡುತ್ತಾ ಇದ್ದೇನೆ ಮುಂದೇನು ಮಾಡುತ್ತೇನೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಗ್ರಾ. ಪಂ. ಅಧ್ಯಕ್ಷರಾದ ಕಲೀಮುಲ್ಲಾ ಖಾನ್ ಮಾತನಾಡಿ ನಮ್ಮ ಕ್ಷೇತ್ರದ ಇತಿಹಾಸದಲ್ಲಿಯೇ ಯಾರು ಮಾಡದ ಅಭಿವೃದ್ಧಿ ಕಾರ್ಯವನ್ನು ನಮ್ಮ ಶಾಸಕರು ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸೋಮಶೇಖರ್ ಲಾವಿಗೆರೆ , ಕೆಡಿಪಿ ಸದಸ್ಯರಾದ ರಜಾಕ್, ಬುಗುರುಕುಂ ಸದಸ್ಯರಾದ ರವಿಕುಮಾರ್, ಹೊಸೂರು ಗ್ರಾ.ಪಂ.ಉಪಾಧ್ಯಕ್ಷರಾದ ಚೌಡಪ್ಪ ಹಾಗೂ ಲತಾ, ಕೋಮಲ, ಮೇನಕ, ಪುಷ್ಪ, ಅಬ್ದುಲ್ ಘನಿ ಹಾಗೂ ಪ್ರಮುಖರು ಹಾಜರಿದ್ದರು.
Leave a Comment