ಲಯನ್ಸ್ ಕ್ಲಬ್ ಭದ್ರಾವತಿ ಸಹಯೋಗದಲ್ಲಿ ಅರಳಿಹಳ್ಳಿ ಸರ್ಕಾರಿ ಶಾಲೆಗೆ 540 ಊಟದ ತಟ್ಟೆ ಕೊಡುಗೆ

ಶಿವಮೊಗ್ಗ:   ಲಯನ್ಸ್ ಕ್ಲಬ್  ಭದ್ರಾವತಿ ಸಹಯೋಗದಲ್ಲಿ ಭದ್ರಾವತಿ ತಾಲ್ಲೂಕು ಅರಳಿಹಳ್ಳಿ ಸರ್ಕಾರಿ  ಪ್ರೌಢ ಶಾಲೆಯಲ್ಲಿ     ಮಧ್ಯಾನ್ಹ ಬಿಸಿಯೂಟ ಕಾರ್ಯಕ್ರಮಕ್ಕೆ ಪೂರಕವಾಗಿ  ವಿದ್ಯಾರ್ಥಿಗಳಿಗೆ ಗುಣಮಟ್ಟದ 540 ಊಟದ ತಟ್ಟೆಗಳನ್ನು ಕೊಡುಗೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..

ಬಿಸಿಯೂಟಕ್ಕೆ ಲಯನ್ಸ್ ಕ್ಲಬ್ ನವರು ತಟ್ಟೆ ಕೊಡುವ ವಿಚಾರ ನಿಜಕ್ಕೂ ಮಾದರಿ ಹಾಗೂ ಪ್ರಶಂಸನೀಯ. ಈ ಕೊಡುಗೆ ಯನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಿ, ಉತ್ತಮ ಅಂಕ ಗಳಿಸಿ. ಅರಳಿಹಳ್ಳಿ ಶಾಲೆ ಗೆ ಹೆಸರು ತನ್ನಿ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇದ್ದರೆ ಎಲ್ಲಾ ಸಾಧನೆಗಳಿಗೂ ಪೂರಕ ವಾಗುತ್ತದೆ ಎಂದು ಮಣಿಶೇಖರ್ ನುಡಿದು ವಿದ್ಯಾರ್ಥಿಗಳಿಗೆ ಪ್ರೆರೇಪಿಸಿದರು. 

ಪ್ರಭಾರಿ ಮುಖ್ಯ ಶಿಕ್ಷಕ  ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಹಾಗೂ ಲಯನ್ಸ್ ನ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಮಮೂರ್ತಿ ಹಾಗೂ ಚಂದ್ರ ಶೇಖರ್ ಇವರು ಲಯನ್ಸ್ ನ ಸೇವಾ ಮನೋಭಾವದ ಬಗ್ಗೆ ಪರಿಚಯಿಸಿ ಲಯನ್ಸ್  ದ್ಯೇಯೋದ್ದೇಶಗಳನ್ನು ತಿಳಿಸಿದರು. ಆಯೋಜಕರಾದ ಶ್ರೀ ಚಂದ್ರಶೇಖರ್ ಕೆ ವಿ ಇವರು ಮತ್ತು ಇತರೆ ಪದಾಧಿಕಾರಿಗಳು ಊಟದ ತಟ್ಟೆಗಳನ್ನು ವಿತರಿಸಿದರು.

 ಶ್ರೀಮತಿ ಜಾನಕಿ ಇವರು ಸರ್ವರಿಗೂ ವಂದಿಸಿದರು. ಇವರಿಗೆ  ಶಾಲೆಯ ಪರವಾಗಿ, SDMC ಪರವಾಗಿ ಮತ್ತು ಫಲಾನುಭವಿಗಳಾದ ವಿದ್ಯಾರ್ಥಿಗಳ ಪರವಾಗಿ ಸನ್ಮಾನ ಮಾಡಲಾಯಿತು.

ಶ್ರೀಮತಿ ಮಮತಾ ನಿರೂಪಿಸಿ, ಶ್ರೀ ರಂಗರಾಜ್ ಎಲ್ಲರನ್ನೂ ಸ್ವಾಗತಿಸಿದರು, ಲಯನ್ಸ್ ನ ಅಧ್ಯಕ್ಷರಾದ ಶ್ರೀಯುತ ಲಯನ್ ರಾಮಮೂರ್ತಿ ನಾಯ್ದು. ಆರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರು ಶ್ರೀ ಮಣಿಶೇಖರ್, ಲಯನ್ ಮಹೇಶ್ ಕುಮಾರ್ ಲಯನ್ ಶ್ರೀನಿವಾಸ್, ಲಯನ್ ಚಂದ್ರಶೇಖರ್ ಕೆ ವಿ ಮಾಜಿ ವಲಯಾಧ್ಯಕ್ಷರು , sdmc ಪ್ರಕಾಶ್, ಅಬ್ದುಲ್ ಹಬೀಬ್, ಇದ್ದರು.

ದಿವಾಕರ್ ಎಂ ಪ್ರಭಾರಿ ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.