ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಆರ್ ಎಂ ಮಂಜುನಾಥ್ ಗೌಡ ಆಯ್ಕೆ

ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಇಂದು ನಡೆದ ಸಭೆಯಲ್ಲಿ ಆರ್ ಎಂ ಎಂ 6 ನೇ ಬಾರಿಗೆ ಆರ್. ಎಂ .ಮಂಜುನಾಥ್ ಗೌಡ ಆಯ್ಕೆಯಾಗಿದ್ದಾರೆ. 
ಸಹಕಾರ ಸಂಘದ ರುದ್ರಪ್ಪರವರು ಚುನಾವಣೆ ಅಧಿಕಾರಿಗಳಾಗಿ ಆಗಮಿಸಿದ್ದರು.  ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಒಂದೇ ಒಂದು ಅರ್ಜಿ ಸಲ್ಲಿಸಿದ್ದ ಕಾರಣ ಆರ್ ಎಂ ಎಂ ಅವಿರೋಧ ಆಯ್ಕೆಯಾಗಿದ್ದಾರೆ.14 ಜನ ನಿರ್ದೇಶಕ ಸ್ಥಾನ ಹೊಂದಿದ್ದ ಡಿಸಿಸಿ ಬ್ಯಾಂಕ್ ನಲ್ಲಿ ಜುಲೈ 28 ರಂದು  ಪ್ರಭಾರಿ  ಅಧ್ಯಕ್ಷರಾಗಿ ಷಡಾಕ್ಷರಿಯವರು ಆಯ್ಕೆಯಾಗಿದ್ದರು. ಕಳೆದ ಎರಡು ತಿಂಗಳಿಂದ ಅವರು ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ *ಶ್ರೀ ಗೋಪಾಲಕೃಷ್ಣ ಬೇಳೂರು* ರವರು ಶಿವಮೊಗ್ಗದಲ್ಲಿ ಇಂದು ನಡೆದ  ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ *ಆರ್.ಎಂ.ಮಂಜುನಾಥ ಗೌಡ* ಅವರಿಗೆ ಅಭಿನಂದನೆ ಸಲ್ಲಿಸಿ ಶುಭಹಾರೈಸಿದರು.

2021 ರಲ್ಲಿ ಆರ್ ಎಂ ಎಂ ನಕಲಿ ಬಂಗಾರದ ಅಡವಿಟ್ಟು ಸಾಲ ಪಡೆದ ಪ್ರಕರಣದಲ್ಲಿ  ವಜಾಗೊಳಿಸಲಾಗಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಜೆ ಬಂದ ಬೆನ್ನಲ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮುಂದಿನ ಏಳೆಂಟು ತಿಂಗಳಿಗೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷತೆ ವಹಿಸಿಕೊಂಡರು.

ರಾಜ್ಯದಲ್ಲ್ಲಿ ಬರಗಾಲವಿದೆ. ಬ್ಯಾಂಕ್ ನ ಅಧ್ಯಕ್ಷರಾಗಿ 25 ವರ್ಷದಿಂದ ಇದ್ದೇನೆ.‌ ರೈತರು ಧೃತಿಗೆಡುವುದು ಬೇಡ ನಿಮ್ಮೊಂದಿಗೆ ಇದ್ದೇನೆ. ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.