ಶಿವಮೊಗ್ಗ ನಗರದ ಸಮಸ್ಯೆ ಮತ್ತು ಸಲಹೆಗೆ ಶಾಸಕರ ಸಹಾಯವಾಣಿಗೆ ಮೇಸೆಜ್ ಮಾಡಿ: ಶಾಸಕ ಎಸ್.ಎನ್.ಚನ್ನಬಸಪ್ಪ ಮಾಹಿತಿ

ಶಿವಮೊಗ್ಗ:ಶಿವಮೊಗ್ಗದ ನಾಗರಿಕರು ತಮ್ಮ ಸಮಸ್ಯೆ ಹಾಗೂ ಸಲಹೆಗಳನ್ನು ಹಂಚಿಕೊಳ್ಳಲು ವ್ಯವಸ್ಥಿತ ವೇದಿಕೆಯೊಂದನ್ನು ಪ್ರಸ್ತುತಪಡಿಸುತ್ತಿದ್ದು, ನಾಗರೀಕರು ಯಾವುದೇ ಸಮಸ್ಯೆ ಮತ್ತು ಸಲಹೆ ಇದ್ದರೂ ವ್ಯಾಟ್ಸಪ್ ನಂಬರ್ 9019901177 ಗೆ ಮೇಸೆಜ್ ಮಾಡುವ ಮೂಲಕ ಶಾಸಕರ ಕಚೇರಿಯನ್ನು ತಲುಪಬಹುದು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ( ಚೆನ್ನಿ) ಹೇಳಿದರು.
ಅವರು ಇಂದು ತಮ್ಮ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ನಂತರ ಈ ಕಾರ್ಯಕ್ರಮಕ್ಕೆ ಅಧಿಕೃತ ವಾಗಿ ಚಾಲನೆ ನೀಡಿದರು.

 'ಸ್ಮಾರ್ಟ್ ಶಿವಮೊಗ್ಗ'. ಇದರ ಭಾಗವಾಗಿ ವಾಟ್ಸಾಪ್ ಹೆಲ್ಡ್ ಲೈನ್ ನಂಬರ್ ಲೋಕಾರ್ಪಣೆಗೊಂಡಿದೆ. ಶಿವಮೊಗ್ಗ ನಗರದ ನಾಗರೀಕರ ಸಹಭಾಗಿತ್ವದಲ್ಲಿ ಅವರ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಂಗ್ರಹ ಮಾಡುವ ಮೂಲಕ ಮುಂದಿನ ಐದು ವರ್ಷಗಳ ಕಾಲ ಶಿವಮೊಗ್ಗ ನಗರವನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ವ್ಯವಸ್ಥೆ ರೂಪಿಸಲಾಗುವುದು. ನಾಗರಿಕರು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಶಾಸಕರ ಕಚೇರಿಗೆ ಈ ಸಹಾಯವಾಣಿಗೆ ವಾಟ್ಸಪ್ ಮೆಸೇಜ್ ಮಾಡುವ ಮುಖಾಂತರ ತಲುಪಿಸಬಹುದಾಗಿದೆ ಎಂದರು.

 ವಿಜ್ಞಾನವು ಅತ್ಯಂತ ವೇಗವಾಗಿ ಮುಂದುವರೆಯುತ್ತಿರುವ ಈ ಕಾಲದಲ್ಲಿ, ತಂತ್ರಜ್ಞಾನದ ಸಮರ್ಥ ಬಳಕೆಯೊಂದಿಗೆ ಎಂತಹ ಕ್ಲಿಷ್ಟ ಸಮಸ್ಯೆಗಳನ್ನಾದರೂ ಪರಿಹರಿಸಬಹುದೆಂಬುದು ಎಲ್ಲರಿಗೂ ತಿಳದಿರುವ ಸಂಗತಿ. ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಮೇ 11 ರಂದು ನಡೆದ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯ ಭಾಷಣದಲ್ಲಿ ಹೇಳಿರುವಂತೆ "ತಂತ್ರಜ್ಞಾನವು ದೇಶದ ಅಭಿವೃದ್ಧಿ ಹೆಚ್ಚಿಸಲು ಇರುವ ಒಂದು ಪ್ರಮುಖ ಉಪಕರಣ”. ಇದೇ ಕಲ್ಪನೆಯೊಂದಿಗೆ ಸಿದ್ಧವಾಗಿರುವುದು ಎಂದರು.

ಅಷ್ಟೇ ಅಲ್ಲದೆ ನಾಗರಿಕರು ಅವರ ಸಮಸ್ಯೆಗಳನ್ನು ಸಹ ವ್ಯಾಟ್ಸಪ್ ನಂ 9019901177 ಗೆ ಮೆಸೇಜ್ ಮುಖಾಂತರ ಕರ್ತವ್ಯ ಭವನಕ್ಕೆ ತಲುಪಿಸಿದರೆ ಅದನ್ನು ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಕಾರ್ಯಕರ್ತರ ಮುಖಾಂತರ ಸೀಮಿತ ಅವಧಿಯೊಳಗೆ ಸಮಸ್ಯೆಯನ್ನು ಬಗೆಹರಿಸಲು ವ್ಯವಸ್ಥೆ ರೂಪಿಸಲಾಗಿದೆ ಎಂದರು.

ಇದು ಜನರ ಹಾಗೂ ಜನಪ್ರತಿನಿಧಿಯ ನಡುವೆ ಸಂಪರ್ಕ ಸಾಧನೆಗೆ ಅನುವಾಗುವ ಒಂದು ಪ್ರಮುಖ ಪರಿಕರವಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲು 'ಕರ್ತವ್ಯಪಡೆ'ಯನ್ನು ಸಜ್ಜುಗೊಳಿಸಲಾಗಿದೆ ಎಂದರು.

ನಾಗರಿಕರು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ನೀಡಿ ನಗರವನ್ನು ಹಸಿರು ನಗರ, ಸ್ವಚ್ಛ ನಗರ, ಸಾಂಸ್ಕೃತಿಕ ನಗರ, ಆರೋಗ್ಯಕರ ನಗರ, ಆಡಳಿತ ಮತ್ತು ಅಭಿವೃದ್ಧಿ ಕುರಿತು, ಕೈಗಾರಿಕೆ ಮತ್ತು ವಾಣಿಜ್ಯ, ಶೈಕ್ಷಣಿಕ, ಕ್ರೀಡ ಹೀಗೆ ಹತ್ತು ಹಲವು ವಿಭಾಗಗಳಲ್ಲಿ ಅಭಿವೃದ್ಧಿ ಹೊಂದಲು ಸಹಕರಿಸಬೇಕಾಗಿ ವಿನಂತಿ ಮಾಡಿದರು.
 ಅದಲ್ಲದೆ, ಮುಂದಿನ ದಿನಗಳಲ್ಲಿ ಪ್ರತಿ ವಾರ್ಡಿನಲ್ಲಿ ಸಲಹಾಪಟ್ಟಿಗೆ ಇಟ್ಟು ಅಲ್ಲಿಯೂ ಕೂಡ ಸಾರ್ವಜನಿಕರು ಮುಕ್ತವಾಗಿ ಮುಂದಿನ ಐದು ಮುಖಾಂತರ ಈ ಯೋಚನೆಯಲ್ಲಿ ಎಲ್ಲರೂ ಪಾಲ್ಗೊಳ್ಳಬಹುದಾಗಿದೆ. ಹೀಗೆ ಹತ್ತು ಹಲವು ಹೊಸ ಹೊಸ ಯೋಚನೆ-ಯೋಜನೆಗಳೊಂದಿಗೆ ಮುಂದಿನ ದಿನದಲ್ಲಿ ನಮ್ಮ ಕಾರ್ಯಕರ್ತರ 'ಕರ್ತವ್ಯ 
ಪಡೆ' 
ಪ್ರತಿ ವಾರ್ಡ್‌ಗಳಿಗೆ ತಲುಪಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಉಪಮೇಯರ್, ಬಿಜೆಪಿ ಜಿಲ್ಲಾ ಅದ್ಯಕ್ಷ ರಾದ ಜಗದೀಶ್,ಮಾಜಿ ಸೂಡಾ ಅದ್ಯಕ್ಷರಾದ ನಾಗರಾಜ್,ಪಾಲಿಕೆ ಸದಸ್ಯ ವಿಶ್ವಾಸ್,ಅಣ್ಣಪ್ಪ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.