ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಸಿ.ಯೋಗಿಶ್ ರವರ ಗೆಲುವು ಖಚಿತ: ಆರ್.ಪ್ರಸನ್ನಕುಮಾರ್

ಶಿವಮೊಗ್ಗ:   ಶಿವಮೊಗ್ಗ ನಗರ ಕ್ಷೇತ್ರದ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಸಿ.ಯೋಗಿಶ್ ರವರು  ಗೆಲುವು ಸಾಧಿಸಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್ ಹೇಳಿದರು.
ಅವರು ಇಂದು ಖಾಸಾಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಮುಖಂಡರೊಂಧಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು, ಈಗಾಗಲೆ ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿ ಮನೆಮನೆಗೆ ಭೇಟಿ ನೀಡಿದ್ದಾರೆ. ಮೂರು ನಾಲ್ಕು ಸುತ್ತಿನ ಪ್ರಚಾರ ಮುಗಿದಿದೆ. ನಿನ್ನೆಯಿಂದ ಬೂತ್ ಸ್ಲಿಪ್ ವಿತರಣಾ ಕಾರ್ಯ ಆರಂಭವಾಗಿದೆ. ಮತದಾರರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ  ನಮ್ಮ ಪಕ್ಷದ ಗೆಲುವು ನಿಶ್ಚಿತ ಎಂದರು.

ಕಾಂಗ್ರೆಸ್ ಮುಖಂಡರಾದ ಸತ್ಯನಾರಾಯಣ ಮಾತನಾಡಿ, ಈ ಚುನಾವಣೆ ದೇಶಕ್ಕೆ ಒಳ್ಳೆಯ ದಿಕ್ಸೂಚಿ ಯಾಗಲಿದೆ. 140ರಿಂದ 150 ಸ್ಥಾನ ಕಾಂಗ್ರೆಸ್‌ಗೆ ಲಭಿಸಲಿದೆ 
ಎಂದರು.  ಕೊಳಚೆ ನಿವಾಸಿಗಳಿಂದ ಹಣ ಸಂಗ್ರಹಿಸಿ ಅವರಿಗಿನ್ನೂ ಮನೆ ಕೊಟ್ಟಿಲ್ಲ. ನಗರ ಪಾಲಿಕೆಯ ಅಕ್ರಮಗಳಲ್ಲಿ ಬಿಜೆಪಿ ಅಭ್ಯರ್ಥಿಯ ಸಹಕಾರ ಇದ್ದು, ಎಲ್ಲವನ್ನೂ ಮತದಾರರು ಗಮನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿದವರು ಯಾರೂ ಕೂಡ ಪಕ್ಷ ಬಿಡಲ್ಲ. ಪಕ್ಷದ ಗೆಲುವು ಖಚಿತ 
ಎಂದರು. 
 
ಮಾಜಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್‌ ಝಾನ್ ಮಾತನಾಡಿ 
 ಮಾತನಾಡಿ, ಹಿಂದಿನ  ಶಾಸಕರು ಶಾಂತಿಭಂಗ ಮಾಡುತ್ತಾ ಶಿವಮೊಗ್ಗದ ನೆಮ್ಮದಿ ಕೆಡಿಸಿದ್ದರು. ಇದೀಗ
ಯೋಗೇಶ್ ಒಬ್ಬ ಯುವನಾಯಕನಾಗಿದ್ದು, ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಅವರ ಕಷ್ಟಗಳಿಗೆ ಸ್ಪಂದಿಸುತ್ತಾ ಸಾರ್ವಜನಿಕರೊಂದಿಗೆ ಬೆರೆತು ಬೆಳೆದಿದ್ದಾರೆ. ಊರಿನಲ್ಲಿ ಶಾಂತಿ ಸೌಹಾರ್ದತೆಗಾಗಿ ಯೋಗೇಶ್ ಅವರನ್ನು ಜನ ಬೆಂಬಲಿಸುತ್ತಾರೆ. ಯಾವುದೇ ಕಾರಣಕ್ಕೂ ಮುಸ್ಲಿಂ 
ಮತಗಳು ಕೋಮುವಾದಿ ಬಿಜೆಪಿಗೆ ಹೋಗುವುದಿಲ್ಲ.
ಅಲ್ಪಸಂಖ್ಯಾತರು ಈಗಾಗಲೇ ತೀರ್ಮಾನಿಸಿದ್ದಾರೆ. ಸಮಯ ಸಾಧಕರು ಮತ್ತು ಪಕ್ಷದಿಂದ ಪಕ್ಷಕ್ಕೆ ಹಾರುವ ವ್ಯಕ್ತಿಗಳಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದರು. 

ಎಸ್.ಕೆ. ಮರಿಯಪ್ಪ ಮಾತನಾಡಿ, ಸರ್ವ ಜನಾಂಗದ ತೋಟವಾಗಲು ಶಿವಮೊಗ್ಗ ಜನತೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಲು ತೀರ್ಮಾನಿಸಿದ್ದಾರೆ ಎಂದರು. ನಗರಸಭಾ 

ಮಾಜಿ ಸದಸ್ಯ ರಮೇಶ್‌ ಹೆಗ್ಡೆ ಮಾತನಾಡಿ, ಇದು 
ನಿರ್ಣಾಯಕ ಚುನಾವಣೆ, ಬಿಜೆಪಿ 
ಭ್ರಷ್ಟಾಚಾರಕ್ಕೆ ರೋಸಿಹೋಗಿದ್ದಾರೆ. ನಾಗರಿಕ ಹಿತರಕ್ಷಣಾ ಸಮಿತಿ ನಗರದಲ್ಲಿ ಅವೈಜ್ಞಾನಿಕ ತೆರಿಗೆ ಹೆಚ್ಚಳದ ವಿರುದ್ಧ ಪ್ರತಿಭಟಿಸಿದ್ದಾಗ ಇದೇ ಚನ್ನಬಸಪ್ಪ ವಿರೋಧಿಸಿದ್ದರು. ಆ ಸಿಟ್ಟು ಜನರಿಗೆ ಇದೆ. ಅಲ್ಲದೆ ಪ್ರತಿಷ್ಠಿತ ಬ್ಯಾರೀಸ್ ಮಾಲನ್ನು 99 ವರ್ಷ ಲೀಸಿಗೆ ನೀಡಿದ ಸಂದರ್ಭದಲ್ಲಿ ಹೋರಾಟ ಪ್ರತಿಭಟನೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಎಸ್.ಪಿ. ದಿನೇಶ್, ಶಿವಾನಂದ್ ಮತ್ತಿತರರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.