ಕೆ.ಎಸ್. ಈಶ್ವರಪ್ಪ ರವರಿಗೆ ಕರೆಮಾಡಿ ಕುಶಲೋಪರಿ ವಿಚಾರಿಸಿದ ಪ್ರಧಾನಿ ಮೋದಿ

ಶಿವಮೊಗ್ಗ:  ಭಾರತದ ಪ್ರಧಾನಮಂತ್ರಿ ಗಳಾದ ಮಾನ್ಯ ಶ್ರೀ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ಶ್ರೀ K.S ಈಶ್ವರಪ್ಪ ರವರಿಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿದರು. 
ಶಿವಮೊಗ್ಗ ನಗರದ ಜನಪ್ರಿಯ ಶಾಸಕರು,  ಬಿಜೆಪಿ ಪಕ್ಷದ ಹಿರಿಯ  ನಾಯಕರು , ರಾಜ್ಯದ  ಮಾಜಿ ಉಪಮುಖ್ಯಮಂತ್ರಿಗಳಾದ  ಸನ್ಮಾನ್ಯ ಈಶ್ವರಪ್ಪನವರು ಚುನಾವಣಾ ರಾಜಕೀಯದಿಂದ ಸ್ವಯಂ ನಿವೃತ್ತಿ ಘೋಷಿಸಿ ಪಕ್ಷದ ಕುರಿತಾಗಿ ತಮ್ಮ ಬದ್ಧತೆಯನ್ನು ತೋರಿಸಿದ ಹಿನ್ನೆಲೆಯಲ್ಲಿ  ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರೇ ದೂರವಾಣಿ ಕರೆ ಮಾಡಿ. ಈಶ್ವರಪ್ಪನವರ ಪ್ರಬುದ್ಧ ನಡೆಯನ್ನು ಪ್ರಶಂಶಿಸಿದರು.

ಪಕ್ಷ ಹಾಗೂ ಸಂಘಟನೆಯು ಸದಾ  ಈಶ್ವರಪ್ಪರವರೊಂದಿಗೆ ಇರುವುದಾಗಿ ತಿಳಿಸುತ್ತಾ  ನರೇಂದ್ರ ಮೋದಿಯವರು ಶಿವಮೊಗ್ಗ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚಿಸಿದರು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.