ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಶಿವಮೊಗ್ಗ ನಗರದಲ್ಲಿ ಸೈಕಲ್ ಜಾಥಾ

 ಶಿವಮೊಗ್ಗ:  ಭಾನುವಾರ ಬೆಳಗ್ಗೆ  *ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಶಿವಮೊಗ್ಗ ನಗರದಲ್ಲಿ ಸೈಕಲ್ ಜಾಥಾವನ್ನು* ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿತ್ತು. 
*ಸೈಕಲ್ ಜಾಥಾವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಿಂದ ಪ್ರಾರಂಭಿಸಿ -* ಅಶೋಕ ಸರ್ಕಲ್ - ನ್ಯೂ ಮಂಡ್ಲಿ - ಗೋಪಾಳ - ಅಳ್ಕೊಳ - ವಿನೋಬನಗರ ಪೊಲೀಸ್ ಚೌಕಿ - ಸಂಗೊಳ್ಳಿ ರಾಯಣ್ಣ ಸರ್ಕಲ್ - ಶಂಕರ್ ಮಠ - ಕರ್ನಾಟಕ ಸಂಘ ವೃತ್ತ - ಡಿ.ವಿ.ಸ್ ಸರ್ಕಲ್ - ಮಹಾವೀರ ಸರ್ಕಲ್ - ಎ ಎ ಸರ್ಕಲ್ - ಅಶೋಕ ಸರ್ಕಲ್ ಮೂಲಕ ಬಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಕವಾಯತು ಮೈದಾನ ದಲ್ಲಿ *ಮುಕ್ತಾಯ ಮಾಡಲಾಯಿತು..
 ಸೈಕಲ್‌ ಜಾಥಾದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಮತ್ತು ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಹಾಗೂ ವಿವಿಧ ಸಂಘಟನೆಯ ಪ್ರಮುಖರು ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.