ನಿವೃತ್ತ ARSI ಆದಿಮೂರ್ತಿ ಹೃದಯಾಘಾತದಿಂದ ನಿಧನ: ಸಂತಾಪ

ಶಿವಮೊಗ್ಗ: 2015 ರಲ್ಲಿ ನಿವೃತ್ತಿ ಹೊಂದಿ ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದ ಶ್ರೀ ಆದಿಮೂತಿ೯ ARSI (Rtd) ರವರು ಇಂದು ಬೆಳಿಗ್ಗೆ ಸ್ವಗ್ರಹದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ನಿವೃತ್ತ ಪೊಲೀಸ್ ಅಧಿಕಾರಿಗಳ  ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ಪಧಾದಿಕಾರಿಗಳು  ಮೃತರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಅವರಿಗೆ ಪೊಲೀಸ್ ಇಲಾಖೆಯಿಂದ ಅಂತ್ಯಕ್ರಿಯೆಯ ಸಂಬಂಧಿಸಿದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಕೊಡಿಸಿ ಕೊಡುವುದಾಗಿ ತಿಳಿಸಿದ್ದಾರೆ.

ಮೃತ ನಿವೃತ್ತ ARSI ಆಧಿಮೂರ್ತಿರವರು ಹಲವಾರು ವರ್ಷಗಳ ಕಾಲ ಶಿವಮೊಗ್ಗದಲ್ಲಿನ ಹಲವಾರು ಎಸ್ಪಿಗಳ ಕಾರ್ ಡ್ರೈವರ್ ಆಗಿ ಕೆಲಸ ಮಾಡಿದ್ದಾರೆ. ಮೃತರು ಎಲ್ಲಾ ಅಧಿಕಾರಿಗಳಿಗೆ ನತ್ತು ಪೊಲೀಸ್ ಸಿಬ್ಬಂದಿ ಯವರಿಗೆ ಚಿರಪರಿಚಿತರು. ನನಗೂ ಸಹ ಆತ್ಮೀಯರು ಕಳೆದವಾರ ನನಗೂ ಸಹ ಪೋನ್ ಮಾಡಿ ಮಾತನಾಡಿದ್ದರು.ಇದೀಗ ಅವರು ಮೃತಪಟ್ಟಿದ್ದಾರೆ ಎಂದರೇ ನಂಬಲಾಗುತ್ತಿಲ್ಲ.

ಮೃತರು ಪತ್ನಿ
ಸಾವಿತ್ರಮ್ಮ,ಪುತ್ರರಾದ ದಿನೇಶ್
ಮತ್ತು ಗಿರೀಶ್,ಪುತ್ರಿ ರಾಗಶ್ರೀ ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು  ಆಗಲಿದ್ದಾರೆ.ಅವರೆಲ್ಲರಿಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೀ ಎಂದು ಸಂಘದ ಅದ್ಯಕ್ಷರು ಮತ್ತು ಕಾರ್ಯದರ್ಶಿಗಳು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.