ಸುಲಿಗೆ ಮತ್ತು ದರೋಡೆ ಮಾಡಿದ ಪ್ರಕರಣದ ಆರೋಪಿಗಳನ್ನ 24 ಗಂಟೆಯೊಳಗೆ ಪತ್ತೆಹಚ್ಚಿ-ಬಂಧನ ಮಾಡಿದ ಶಿವಮೊಗ್ಗದ ಪೊಲೀಸರು

ಶಿವಮೊಗ್ಗ: ದಿನಾಂಕಃ- 17-03-2023 ರಂದು ಸಂಜೆ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ *ಜೈಲ್ ರಸ್ತೆಯ ಬಳಿ ಯಾರೋ ಅಪರಿಚಿತರು ಶ್ರೀ ಚಂದ್ರಶೇಖರ್, 38 ವರ್ಷ, ಮಲ್ಲಾಫುರ ಗ್ರಾಮ ರವರ ಮೊಬೈಲ್ ಫೊನ್ ಅನ್ನು ಕಿತ್ತುಕೊಂಡು ಹೋಗಿ,* ಮತ್ತೆ ಮೊಬೈಲ್ ಕೊಡುವ ನೆಪದಲ್ಲಿ ಶಿವಮೊಗ್ಗ ನಗರದ ಹೊಸಮನೆಗೆ ಬರಲು ಹಳಿ ಹಣವನ್ನು ಕಿತ್ತು ಹೋಗಿರುತ್ತಾರೆ. ಆನಂತರ ಪುನಾಃ *ಯಾರೋ 05 ಜನ ಅಪರಿಚಿತರು ಬಂದು ಚಂದ್ರಶೇಖರ್ ರವರಿಗೆ ನಿಮ್ಮ ಮೊಬೈಲ್ ಕೊಡಿಸುತ್ತೇವೆ ಬನ್ನಿ ಎಂದು ಹೇಳಿ ಆಟೋದಲ್ಲಿ ಸೋಮಿನಕೊಪ್ಪ ಹತ್ತಿರದ ಖಾಲಿ ಲೇಔಟ್ ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿ* ರಕ್ತಗಾಯ ಪಡಿಸಿ ಎಟಿಎಂ ಕಾರ್ಡ್ ಅನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ದಿನಾಂಕಃ-18/03/2023 ರಂದು ಗುನ್ನೆ ಸಂಖ್ಯೆ 52/2023 ಕಲಂ 397 ಐಪಿಸಿ ರೀತ್ಯಾ ಪ್ರಕರಣವನ್ನು ವಿನೋಬನಗರ ಪೊಲೀಸ್ ಠಾಣೆ ಯಲ್ಲಿ ದಾಖಲಿಸಿಕೊಳ್ಳಲಾಗಿರುತ್ತದೆ. ಸದರಿ ಪ್ರಕಣದಲ್ಲಿ ಕಳುವಾದ ವಸ್ತುಗಳು ಮತ್ತು ಆರೋಪಿತರನ್ನು ಪತ್ತೆ ಹಚ್ಚಲು *ಶ್ರೀ ಮಿಥುನ್ ಕುಮಾರ್ ಜಿ ಕೆ, ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು *ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ,* ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, *ಶ್ರೀ ಸುರೇಶ್ ಎಂ* ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪವಿಭಾಗ-ಬಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, *ಶ್ರೀ ಸಂಜೀವ್ ಕುಮಾರ ಜೆ ಮಹಾಜನ್,* ಪೊಲೀಸ್ ನಿರೀಕ್ಷಕರು, ವಿನೋಬನಗರ ಪೊಲೀಸ್ ಠಾಣೆರವರ ನೇತೃತ್ವದಲ್ಲಿ, ಸುನೀಲ್, ಬಿ.ಸಿ, ಪಿಎಸ್ಐ, ಟಿ.ಡಿ ಸಾಗರಕರ್ ಪಿಎಸ್ಐ, ವಿರೇಶಪ್ಪ ಟಿ.ಎಸ್, ಎಎಸ್ಐ, ರಮೇಶ್ ಎಎಸ್ಐ ಮತ್ತು ಸಿಬ್ಬಂದಿಗಳಾದ ಸಿಪಿಸಿ ರಾಜು ಕೆ ಆರ್, ಚಂದ್ರನಾಯ್ಕ ಬಿ, ಮಲ್ಲಪ್ಪ, ಅರುಣ ಕುಮಾರ ಎನ್ ಕೆ, ಮೂರ್ತಿ ಮತ್ತು ವಿಜಯ ಕುಮಾರ ಓಲಿ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ದಿನಾಂಕಃ-19-03-2023 ರಂದು ಪ್ರರಕಣದ *ಆರೋಪಿತರಾದ 1) ರಾಜು ಡಿ @ ಚೊಟ್ಟ, 29 ವರ್ಷ, ಕಲ್ಲಳ್ಳಿ ಕಾಶಿಪುರ ಶಿವಮೊಗ್ಗ ಟೌನ್, 2) ಈಶ್ವರ, 28 ವರ್ಷ, ಹೊಸಮನೆ, ಶಿವಮೊಗ್ಗ ಟೌನ್, 3) ರಾಜು @ ಗುನ್ನಾ, 20 ವರ್ಷ, ಹೊಸಮನೆ, ಶಿವಮೊಗ್ಗ ಟೌನ್, 4) ಮಣಿಕಂಠ ಎ.ಎಲ್, 29 ವರ್ಷ, ಶರಾವತಿನಗರ, ಶಿವಮೊಗ್ಗ ಟೌನ್, 5) ವಿಜಯ್, 25 ವರ್ಷ, ಬೊಮ್ಮನಕಟ್ಟೆ ಶಿವಮೊಗ್ಗ ಟೌನ್, 6) ರಘು ಬಿನ್ ಹರೀಶ್ 21 ವರ್ಷ, ಹೊಸಮನೆ, ಶಿವಮೊಗ್ಗ ಟೌನ್ ದಸ್ತಗಿರಿ ಮಾಡಿ 03 ಜನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು* ಪ್ರಕರಣ ದಾಖಲಾದ 24  ಗಂಟೆಯಗಳ ಒಳಗಾಗಿ ವಶಕ್ಕೆ ಪಡೆದು, ಸದರಿಯವರಿಂದ *ವಿನೋಬನಗರ ಪೊಲೀಸ್ ಠಾಣೆಯ 01 ದರೋಡೆ ಮತ್ತು 01 ಸುಲಿಗೆ ಪ್ರಕರಣ ಸೇರಿ ಒಟ್ಟು 02 ಪ್ರರಕಣಗಳಿಗೆ ಸಂಬಂಧಿಸಿದ 02 ಎಟಿಎಂ ಕಾರ್ಡುಗಳು, ಒಂದು ಮೊಬೈಲ್ ಮತ್ತು ನಗದು ಹಣ ರೂ 9,200/- ಅನ್ನು* ಅಮಾನತ್ತು ಪಡಿಸಿಕೊಂಡಿರುತ್ತಾರೆ.
 ಸದರಿ *ತನಿಖಾ ತಂಡವು ಪ್ರಕರಣ ದಾಖಲಾದ 24 ಗಂಟೆಗಳ ಒಳಗಾಗಿ ಆರೋಪಿತರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದು, ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು,* ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.