ಭದ್ರಾವತಿ ತಾಲ್ಲೂಕಿನ ಹನುಮಂತಾಪುರದಲ್ಲಿ ಪ್ರವೇಶದ ಬಳಿ ರೈತ ಸಂಘದ ನೂತನ ಬೋರ್ಡ್ ಉದ್ಘಾಟನೆ

ಭದ್ರಾವತಿ:   ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್ ಆರ್ ಬಸವರಾಜಪ್ಪನವರು ಹಾಗೂ ಹಿರಿಯ ರೈತ ಮುಖಂಡರಾದ ಕಡಿದಾಳ್ ಶಾಮಣ್ಣನವರು ರಾಜ್ಯಾಧ್ಯಕ್ಷರ ಸ್ವಗ್ರಾಮವಾದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹನುಮಂತಾಪುರದಲ್ಲಿ ಗ್ರಾಮದ ಪ್ರವೇಶದ ಬಳಿ ರೈತ ಸಂಘದ ನೂತನ ಬೋರ್ಡ್ ನ್ನ ಉದ್ಘಾಟಿಸಿದರು.

ನಂತರ ಜಗಜ್ಯೋತಿ ಬಸವೇಶ್ವರ, ಡಾ|| ಬಾಬಾ ಸಾಹೇಬ್ ಅಂಬೇಡ್ಕರ್, ಛತ್ರಪತಿ ಶಿವಾಜಿ, ಮಹರ್ಷಿ ವಾಲ್ಮೀಕಿ, ಕನಕದಾಸ, ಸಂತ ಸೇವಾಲಾಲ್, ಪ್ರವಾದಿ ಮಹಮದ್ ಪೈಗಂಬರ್ ಈ ಎಲ್ಲಾ ದಾರ್ಶನಿಕರ ಜಯಂತಿಯನ್ನು ಹಾಗೂ ಸಭೆಯನ್ನು ನಡೆಸಲಾಯಿತು. ಈ ಸಮಯದಲ್ಲಿ ಭದ್ರಾವತಿ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕುಮಾರ್ ರವರು ದಾರ್ಶನಿಕರ ಕುರಿತು ಉಪಾನ್ಯಾಸವನ್ನು ನೀಡಿದರು.

ಈ ಸಂಧರ್ಭದಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕಿನ ಮತ್ತು ಗ್ರಾಮದ ಎಲ್ಲಾ ಪದಾಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.