ಭದ್ರಾವತಿ: ಕೊಲೆ ಮಾಡಿದ ಆರೋಪಿಗಳ ಬಂಧನ

ಭದ್ರಾವತಿ :ದಿನಾಂಕ:24-10-2022 ರಂದು ಬೆಳಗ್ಗೆ *ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಎನ್. ರಸ್ತೆ ಎ.ಪಿ.ಎಂ.ಸಿ ಆವರಣದಲ್ಲಿರುವ MAMCOS ಕಟ್ಟಡದ ಹತ್ತಿರ ಖಾಲಿ ಜಾಗದಲ್ಲಿ ಯಾರೋ ಒಬ್ಬ ವ್ಯಕ್ತಿಯನ್ನು ಬಿದಿರಿನ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ* ಮಾಡಿರುವ ಕುರಿತು ಗುನ್ನೆ ಸಂಖ್ಯೆ 0133/2022 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿಗಳ ಪತ್ತೆಗಾಗಿ ಭದ್ರಾವತಿ ಟೌನ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ  ಪಿಎಸ್ಐ ಹಳೆನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳನ್ನು ಒಳಗೊಂಡ  *ವಿಶೇಷ ತಂಡವನ್ನು ರಚನೆ* ಮಾಡಿದ್ದು, ಸದರಿ ತಂಡವು  ದಿನಾಂಕ:26-10-2022 ರಂದು ಪ್ರಕರಣದ ಆರೋಪಿಗಳಾದ *1) ಕುಶಾಲ್ ಕುಮಾರ್, 35 ವರ್ಷ, ಕಾಚಗೊಂಡನಹಳ್ಳಿ  ಭದ್ರಾವತಿ, 2) ಸೋಮಶೇಖರ್ @ ಪುಟ್ಟ @ ಕಪ್ಪೆ 33 ವರ್ಷ, ಹುತ್ತಾಕಾಲೋನಿ, ನ್ಯೂಟೌನ್,  ಭದ್ರಾವತಿ ರವರುಗಳನ್ನು*  ದಸ್ತಗಿರಿ ಮಾಡಿರುತ್ತಾರೆ.   ಆರೋಪಿಗಳಿಗೂ ಮತ್ತು ಮೃತ ರೂಪೇಶ್ ಕುಮಾರ್ ನಿಗೂ ಈ *ಹಿಂದೆ ಇದ್ದ  ಹಳೇ ದ್ವೇಷದ ವಿಚಾರದಲ್ಲಿ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಆರೋಪಿತರು ರೂಪೇಶ್ ಕುಮಾರ, 45 ವರ್ಷ, ಶಿವಮೊಗ್ಗ ಈತನಿಗೆ ಬಿದಿರಿನ ದೊಣ್ಣೆಯಿಂದ ಹೊಡೆದು ಕೊಲೆ*
 ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಸದರಿ ತಂಡದ ಉತ್ತಮ ಕಾರ್ಯವನ್ನು ಶ್ಲಾಘಿಸಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.