ಶಿವಮೊಗ್ಗ: ಭರ್ಮಪ್ಪ ಬೀದಿಯಲ್ಲಿ ಕಲ್ಲಿನಿಂದ ವ್ಯಕ್ತಿ ಯೋರ್ವನ ಮೇಲೆ ಹಲ್ಲೆ: ಮೆಗ್ಗಾನ್ ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ನಗರದ ಭರ್ಮಪ್ಪನಗರ 2 ನೇ ಕ್ರಾಸ್ ಹತ್ತಿರ ಸೋಮವಾರ ರಾತ್ರಿ ಸರಿ ಸುಮಾರು 11-30 ಗಂಟೆ ಸಮಯದಲ್ಲಿ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಘೋಷಣೆ ಕೂಗುತ್ತಾ ಹಿಂದೂ ಕಾರ್ಯಕರ್ತ ಭರ್ಮಪ್ಪನಗರ ಬೀದಿಯ ಪ್ರಕಾಶ್(25) ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾದ ಘಟನೆ ವರಧಿಯಾಗಿದೆ.ಹಲ್ಲೆಗೊಂಡ ಪ್ರಕಾಶ್ ರನ್ನ ಮೆಗ್ಗಾನ್ ನಲ್ಲಿ ದಾಖಲಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿ ಪ್ರಕಾಶ್(25) ತಲೆಗೆ ಮೈನರ್ ಗಾಯ ವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದೆನೆ. ಮೆಗ್ಗಾನ್ ಡಾಕ್ಟರ್ ರವರು ಗಾಯಾಳು ಸೇಫ್ ಆಗಿರುವುದಾಗಿ ತಿಳಿಸಿರುವುದಾಗಿ ಎಸ್ಪಿ ತಿಳಿಸಿದ್ದಾರೆ.ಸಿಸಿ ಕ್ಯಾಮರಾಗಳ ಫುಟೇಜ್ ಸಹ ಚೆಕ್ ಮಾಡಲಾಗಿದೆ.ಹಲ್ಲೆ ಮಾಡಿದ ಮೂವರು ದುಷ್ಕರ್ಮಿಗಳ ಬಂಧನಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಮಾದ್ಯಮಗಳಿಗೆ ಎಸ್ಪಿ ಜಿ.ಕೆ.ಮಿಥುನ್ ಮಾಹಿತಿಯನ್ನು ನೀಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಸೀಗೆಹಟ್ಟಿ ಭಾಗದಲ್ಲಿ ಹೆಚ್ಚಿನ ಪೊಲೀಸರ ನಿಯೋಜಿಸಲಾಗಿದೆ. ಸ್ಥಳಕ್ಕೆ ಎಸ್ ಪಿ ಮಿಥುನ್ ಕುಮಾರ್ ಭೇಟಿನೀಡಿದ್ದಾರೆ-
ಹಿಂದು ಕಾರ್ಯಕರ್ತ ಮೃತ ಹರ್ಷನ ಕುಟುಂಬಸ್ಥರಿಗೆ ಸಹ ಬೆದರಿಕೆ ಹಾಕಿದ ಘಟನೆ ನಡೆದಿದೆ ಎನ್ನಲಾಗಿದೆ.
ತಡರಾತ್ರಿ ಮಾರಕಾಸ್ತ್ರ ಹಿಡಿದು ಬೈಕ್ನಲ್ಲಿ ಕೂಗುತ್ತಾ ಬಂದ ಅನ್ಯಕೋಮಿನ ಯುವಕರ ಗುಂಪು.ಆರ್. ಎಸ್.ಎಸ್, ಬಜರಂಗದಳದ ಗುಂಡಾಗಳೇ ಬರ್ರೋ ಎಂದು ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.
ಈ ವೇಳೆ ಹರ್ಷನ ಮನೆಯಿರುವ ರಸ್ತೆಯಲ್ಲಿ ಕೂಗುತ್ತಾ ಬೆದರಿಕೆ ಹಾಕಿರುವುದು ತಿಳಿದು ಬಂದಿದೆ.
ವಿಷಯ ತಿಳಿದ ದುಷ್ಕರ್ಮಿಗಳನ್ನ ಸ್ಥಳೀಯ ಯುವಕರ ಗುಂಪೊಂದು ಹಿಂಬಾಲಿಸಿದೆ. ಆದರೆ ಯಾರೂ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ.
ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಈ ಸಂಬಂದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
Leave a Comment