ಭದ್ರಾವತಿ ಎಪಿಎಂಸಿ ಯಾರ್ಡ್ ನಲ್ಲಿ ವ್ಯಕ್ತಿಯೋರ್ವನ ಕೊಲೆ

ಭದ್ರಾವತಿ:  ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಪಿಎಂಸಿ ಯಾರ್ಡ್ ಒಳಗಡೆ ಭಾನುವಾರ ರಾತ್ರಿಯ ವೇಳೆ ಸುಮಾರು 2 ಗಂಟೆ ಸಮಯದಲ್ಲಿ ರೂಪೇಶ್ ಕುಮಾರ್ (45) ವ್ಯಕ್ತಿಯೋರ್ವನನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ.

ನಿನ್ನೆ ರಾತ್ರಿ ಎಪಿಎಂಸಿ ಯಾರ್ಡ್ ಒಳಗೆ ಕುಡಿಯುತ್ತಾ ಕುಳಿತಿದ್ದ ರೂಪೇಶ್ ಕುಮಾರ್  ಮತ್ತು ಸ್ನೇಹಿತರು ಪರಸ್ಪರ ಜಗಳವಾಡಿಕೊಂಡಿದ್ದಾರೆ. ಕುಡಿದ ಅಮಲಿನಲ್ಲಿ ಸ್ನೇಹಿತರು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಶಿವಮೊಗ್ಗದಲ್ಲಿಆಟೋಚಲಾಯಿಸಿಕೊಂಡು ಜೀವನ ನಡೆಸುತ್ತಿದ್ದ ರೂಪೇಶ್ ಮೂಲ ವಾಸ ಹೊಳೆಹೊನ್ನೂರು ಒಂದು ವರ್ಷದ ಹಿಂದೆ ಪತ್ನಿಯೊಂದಿಗೆ ಸರಿಯಾಗಿ ಸಂಸಾರ ಮಾಡದೆ ಪ್ರತ್ಯೇಕವಾಗಿ ಬದುಕುತ್ತಿದ್ದನು. 

ಬೆಂಗಳೂರಿನ ಲಗ್ಗೇರಿಯ ಗಾರ್ಮೆಂಟ್ಸ್ ನಲ್ಲಿ ಈಕೆಯ ಪತ್ನಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.ರೂಪೇಶ್ ಕುಮಾರ್ ನ ಪತ್ನಿಯ ಮನೆ ಭದ್ರಾವತಿ ಎಂದು ತಿಳಿದುಬಂದಿದೆ.

ಕುಡಿಯಲು ಕುಶಾಲ್ ಮತ್ತು ಸೋಮಶೇಖರ್ ಎಂಬುವರೊಂದಿಗೆ ನಿನ್ನೆ ರೂಪೇಶ್ ಕುಮಾರ್ ಕುಡಿಯಲು ಎಪಿಎಂಸಿಗೆ ಹೋಗಿದ್ದನು ಎನ್ನಲಾಗಿದೆ. 
  
ಈ ಕೊಲೆ ಪ್ರಕರಣ ಸಂಬಂದ ಹಳೇನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಆಗಿದ್ದು, ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.