ಶಿವಮೊಗ್ಗ ನಗರದ ಆರ್ಕಿಡ್ ಹೋಟೆಲ್ ಬಳಿ ಘಟನೆ ಅಶೋಕ್ ಪ್ರಭು ವ್ಯಕ್ತಿಯ ಮುಖಕ್ಕೆ 4 ಜನರಿಂದ ಹಲ್ಲೆ ಗಾಯ: ಆಸ್ಪತ್ರೆಗೆ ದಾಖಲು

ಶಿವಮೊಗ್ಗ:  ಅಶೋಕ್ ಪ್ರಭು ಎಂಬ ವ್ಯಕ್ತಗೆ ಹರಿತವಾದ ವಸ್ತುವಿನಿಂದ  ದುಷ್ಕರ್ಮಿಗಳು ಹಲ್ಲೆ ಮಾಡಿದ್ದು ಗಾಯವಾಗಿದೆ..ಇಂದು  ಶಿವಮೊಗ್ಗ ನಗರದ ಆರ್ಕಿಡ್ ಹೋಟೆಲ್ ಬಳಿ ಘಟನೆ ನಡೆದಿದೆ.
4 ಮಂದಿ ಬಂದು ಹಿಂದಿನಿಂದ ಹೊಡೆದಿದ್ದಾರೆ, ಅವರು ಬ್ಯಾಲೆನ್ಸ್ ಕಳೆದುಕೊಂಡು ಅಂಗಡಿಯೊಂದಕ್ಕೆ ಓಡಿಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ದುಷ್ಕರ್ಮಿಗಳು ಮೊಬೈಲ್ ಕೇಳಿದಾಗ ಅವರು ನಿರಾಕರಿಸಿದ್ದಾರೆ. 
ಆದ್ದರಿಂದ ಅವರು ತೀಕ್ಷ್ಣವಾದ ವಸ್ತುವನ್ನು ಬಳಸುತ್ತಾರೆ ಮತ್ತು ಮುಖದ ಮೇಲೆ ಕೆನ್ನೆಯ ಕೆಳಭಾಗದಲ್ಲಿ ಗಾಯಗೊಳಿಸಿದ್ದಾರೆ . ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಿಸಿ ಕ್ಯಾಮೆರಾಗಳನ್ನು ಗುರುತಿಸಿ.. ಆರೋಪಿಯನ್ನು ಹಿಡಿಯಲು ಪ್ರಯತ್ನ ಮುಂದುವರಿದಿದೆ. 

ಅಶೋಕ್ ಪ್ರಭು ಕುತ್ತಿಗೆ ಭಾಗಕ್ಕೆ ಹೊಡೆತಬಿದ್ದಿದೆ. ಗಲ್ಲದ ಚರ್ಮವೂ ತರಚಿದೆ. ಈ ದೃಶ್ಯಾವಳಿಗಳು ಅಲ್ಲಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ  ನಡೆದಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಹಲ್ಲೆಗೊಳಗಾದ ಅಶೋಕ್ ಪ್ರಭು ಶಿವಮೊಗ್ಗದ ಗಾಂಧಿ ಬಜಾರ್ ನ ಅಶೋಕ ರಸ್ತೆ ನಿವಾಸಿ ಎಂದು ತಿಳಿದು ಬಂದಿದೆ. ಈತನಿಗೆ 42 ವರ್ಷ ವಯಸ್ಸು ಎಂದು ಹೇಳಲಾಗುತ್ತಿದೆ

ಸ್ಥಳಕ್ಕೆ ಪೋಲೀಸರು ಧಾವಿಸಿದ್ದಾರೆ. ತನಿಖೆ ಮುಂದುವರಿದಿದೆ.
ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪೊಲೀಸ್ ಇಲಾಖೆ ವಿನಂತಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಚಾಕು ಇರಿತ ಎಂದು ಹಾಕಬೇಡಿ : ಎಸ್ಪಿ ಮನವಿ
 ಗಾಯಾಳು  ಅವರು ನಡೆದುಕೊಂಡು ಹೋಗುತ್ತಿದ್ದರು.. ಎರಡೂ ಕಡೆಯವರು ಬೈಕ್‌ನಲ್ಲಿ ಇರಲಿಲ್ಲ.. ಅಲ್ಲದೆ, ಅವರು ಯಾವ ಹರಿತವಾದ ವಸ್ತುವನ್ನು ಬಳಸಿದ್ದಾರೆ ಎಂಬುದು ಇನ್ನು  ಖಚಿತವಾಗಿಲ್ಲ. ನಡೆದ.ಘಟನೆಯನ್ನು ಅದನ್ನು ಚಾಕು ಇರಿತ ಎಂದು ಹಾಕಬೇಡಿ ಎಂದು ಮಾದ್ಯಮದವರನ್ನ ಎಸ್ಪಿ ವಿನಂತಿ ಮಾಡಿದ್ದಾರೆ. ತನಿಖೆ ವಿಚಾರಣೆಯ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
 


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.