ಗಂಡ-ಹೆಂಡತಿ ನಡುವೆ ಗಲಾಟೆ: ಪತ್ನಿಯ ಕತ್ತು ಕೊಯ್ದು ತಾನು ಆಸ್ಪತ್ರೆ ಸೇರಿದ ಪತಿರಾಯ!!

ಶಿವಮೊಗ್ಗ:  ರಾತ್ರಿ ಗಂಡ ಹೆಂಡತಿಯ ನಡುವೆ ಗಲಾಟೆಯಾಗಿದ್ದು, ಬೆಳಿಗ್ಗೆ ಅಡುಗೆ ಮನೆಯ ರಕ್ತದ ಮಡುವಿನಲ್ಲಿ  ಪತ್ನಿ ಪತ್ತೆಯಾಗಿದ್ದಾಳೆ. ಮೃತ ಮಹಿಳೆಯನ್ನ ಮಂಜುಳ (33) ಎಂದು ಗುರುತಿಸಲಾಗಿದೆ.

ಪತಿ ದಿನೇಶ್ ಸಹ ಕೈಕೊಯ್ದುಕೊಂಡಿದ್ದು ಆತನಿಗೆ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ. ನಿನ್ನೆ ತುಂಗನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪ್ರಿಯಾಂಕ ಲೇಔಟ್ ನಲ್ಲಿ ದಿನೇಶ್ ಮತ್ತು ಮಂಜುಳಾರ ನಡುವೆ ಗಲಾಟೆಯಾಗಿದ್ದು ಈ ಗಲಾಟೆಯೇ ಕೊಲೆಗೆ ಕಾರಣವಾಗಿದೆ ಎಂದು ಪತಿ ದಿನೇಶ್ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

  ಪತಿ ಮತ್ತು ಪತ್ನಿಯರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ದಿನೇಶ್ ಮೆಸ್ಕಾಂ ನೌಕರರಾಗಿದ್ದು ಮನೆಗೆ ತಡವಾಗಿ ಬರುವ ವಿಚಾರದಲ್ಲಿ ಆಗಾಗ್ಗೆ  ಜಗಳ ವಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

ಆದರೆ ಕೊಲೆಗೆ ಕಾರಣವೇನು ಎಂಬುದು ಇನ್ನೂ ತನಿಖೆಯಿಂದ ತಿಳಿದು ಬರಬೇಕಿದೆ. ಇಂದು ಬೆಳಿಗ್ಗೆ ಜಾವ 3 ಗಂಟೆಗೆ ಮೃತ ಮಹಿಳೆ ಮಂಜುಳ 12 ವರ್ಷಗಳ ವರೆಗೆ ದಿನೇಶ್ ನೊಂದಿಗೆ ಸಂಸಾರ ನಡೆಸಿದ್ದಾರೆ. 

ಮಂಜುಳ ಮತ್ತಿಘಟ್ಟದ ನಿವಾಸಿಯವರಾಗಿದ್ದಾರೆ.  12 ವರ್ಷ,ಮತ್ತು 7 ವರ್ಷದ ಎರಡು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

ದಿನೇಶ್ ಮಂಜುಳ ಕುತ್ತಿಗೆ ಕೊಯ್ದು ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಪತ್ನಿಯನ್ನ ಚಾಕುವಿನಿಂದ ಕೊಲೆ ಮಾಡಿ ತನ್ನ ಕೈಗಳನ್ನ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತುಂಗಾ ನಗರ ಪೊಲೀಸರು ಭೇಟಿ ನೀಡಿದ್ದಾರೆ.

 ಈ ಸಂಬಂಧ  ತುಂಗಾ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಿಯಾಂಕ ಲೇಔಟ್ ಮಹಿಳೆ ಮಂಜುಳ ಕೊಲೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು. ತನಿಖೆ ಮುಂದುವರಿದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.