ಬೈಕ್ ಅಪಘಾತ:ಕಟ್ಟೆಹಕ್ಲು ಶಾಲೆಯ ಹೆಡ್ ಮಾಸ್ಟರ್ ವೆಂಕಟೇಶ್ ಸಾವು

ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಸಮೀಪ ನಾಗರವಳ್ಳಿ ಬಳಿ ಈಗ ಕೆಲಹೊತ್ತಿಗೆ ಮೊದಲು ಭೀಕರ ಆಕ್ಸಿಡೆಂಟ್​ ವೊಂದು ಸಂಭವಿಸಿದೆ. ಕಟ್ಟೆಹಕ್ಲು ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್​ ವೆಂಕಟೇಶ್ ಎಂಬವರು, ಬೈಕ್​ನಲ್ಲಿ ಬರುತ್ತಿದ್ದಾಗ, ಟರ್ನಿಂಗ್​ನಲ್ಲಿ ಒಮಿನಿಗೆ ಗುದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವೆಂಕಟೇಶ್​ರವರು ಸಾವನ್ನಪ್ಪಿದ್ದಾರೆ.

ಶಾಲೆಯ ಕೆಲಸದ ಸಲುವಾಗಿಯೇ ಎಲ್ಲಿಗೊ ಹೊರಟ್ಟಿದ್ದರು ಎನ್ನಲಾಗುತ್ತಿದ್ದು, ಟರ್ನಿಂಗ್​ ಸ್ಪೀಡ್ ಆಗಿದ್ದ ಒಮಿನಿಗೆ ಬೈಕ್​ ಡಿಕ್ಕಿಯಾಗಿದೆ. ಇನ್ನೂ ಮೂಲತಃ ಕೊಪ್ಪ ತಾಲ್ಲೂಕಿನ ಬೊಮ್ಲಾಪುರದವರಾದ ವೆಂಕಟೇಶ್​ ಈ ವರ್ಷ ಪ್ರಮೋಶನ್​ ಪಡೆದು ಹೆಡ್​ಮಾಸ್ಟರ್ ಆಗಿ ಕಟ್ಲೆ ಹಕ್ಲು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.

ಸುತ್ತಮುತ್ತ ಉತ್ತಮ ಮೇಷ್ಟ್ರು ಎಂದು ಹೆಸರು ಮಾಡಿದ್ದ ಅವರ ನಿಧನಕ್ಕೆ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.'

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.