ಪೋಕ್ಸೋ ಕೇಸ್ ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ಬಂಧನ ವದಂತಿ!!

ಹಾವೇರಿ:  ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ  ಪೊಲೀಸರು ಮುರುಘಾ ಮಠದ ಶ್ರೀಗಳನ್ನು  ಬಂಧಿಸಲಾಗಿದೆ ಎಂಬ ವದಂತಿ ಹಬ್ಬಿದೆ.

ಹಾವೇರಿ ಜಿಲ್ಲೆಯ ಬಂಕಾಪುರದ ಬಳಿಯ ಹೆದ್ದಾರಿಯಲ್ಲಿ ಇಂದು ಪೋಕ್ಸೋ ಕೇಸ್ ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಈ ಪೋಕ್ಸೋ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದಂತ ಮುರುಘಾ  ಅಜ್ಞಾತ ಸ್ಥಳಕ್ಕೆ ತೆರಳುವ ಹಿನ್ನಲೆಯಲ್ಲಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ಖಚಿತ ಮಾಹಿತಿಯನ್ನು ಆಧರಿಸಿ, ಅವರನ್ನು ಬಂಧಿಸಲಾಗಿದೆ.

ಮತ್ತೊಂದೆಡೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ ಅವರು, ಮುರುಘಾ ಶರಣರ ವಿರುದ್ಧ ಎಫ್‌ಐಆರ್ ಆಗಲ್ಲ. ಎಫ್‌ಐಆರ್ ಆದ್ರೇ ನೋಡೋಣ. ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ಪ್ರಕರಣ ಮಠದ ಒಳ ಜಗಳವಾಗಿದೆ. ಈಗ ಈ ಜಗಳ ಎಲ್ಲೆಲ್ಲೋ ಹೋಗುತ್ತಿದೆ ಅಷ್ಟೇ ಎಂದಿದ್ದರು.
ಮಾಜಿ ಶಾಸಕ ಎಸ್ ಕೆ ಬಸವರಾಜನ್ ಹಾಗೂ ಸ್ವಾಮೀಜಿಗಳ ಜಗಳದಿಂದ ಹೀಗೆ ಆಗಿದೆ. ಕೋರ್ಟ್ ಏನ್ ತೀರ್ಮಾನ ಕೈಗೊಳ್ಳುತ್ತೋ ನೋಡೋಣ. ಸ್ವಾಮೀಜಿಗಳ ಮೇಲೆ ಆರೋಪ ಮಾಡಿರುವುದು ತಪ್ಪು ಎಂದು ಹೇಳಿದ್ದರು.

ರಾಜ್ಯದಲ್ಲಿ ಒಂದಿಬ್ಬರು ಸ್ವಾಮೀಜಿಗಳು ಉಳಿದುಕೊಂಡಿದ್ದಾರೆ. ಅವರು ಸಮಾಜವನ್ನು ತಿದ್ದುವಂತ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಪ್ರಯತ್ನಗಳಿಗೆ ತೊಂದರೆ ನೀಡಬಾರದು ಎಂದಿದ್ದರು.

ಅಂದಹಾಗೇ ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಮೈಸೂರಿನ ನಜರಾಬಾದ್ ಠಾಣೆಯಿಂದ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಈ ಬಳಿಕ ತನಿಖೆ ಆರಂಭಿಸಿದ್ದಂತ ಪೊಲೀಸರು ನಿನ್ನೆ ಬಾಲಕಿಯರನ್ನು ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೇ ವೈದ್ಯಕೀಯ ಪರೀಕ್ಷೆಗೂ ಹಾಜರುಪಡಿಸಿದ್ದರು. ಈ ಪ್ರಕರಣದಲ್ಲಿಯೇ ಇದೀಗ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಮುರುಘ ಮಠದ ಶ್ರೀಗಳು ಬಂಧನವಾಗಿಲ್ಲ: ಸಂಸದ ಬಿವೈಆರ್

ಮುರುಘ ಮಠದ ಶ್ರೀಗಳು ಬಂಧನವಾಗಿಲ್ಲವೆಂದು ಸಂಸದ ಬಿ .ವೈ. ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಬಂದ ಮಾಹಿತಿಯಾಧಾರದ ಮೇರೆಗೆ ಅಲ್ಲಿನ ಅಧಿಕಾರಿಗಳನ್ನ ಕೇಳಿದೆ ಆದರೆ ಅಧಿಕಾರಿಗಳು ಸ್ವಾಮೀಜಿಗಳ ಬಂಧನವಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಬೆಳೆಗಾವಿಗೆ ನ್ಯಾಯಾಲಯದ ಸಂಬಂಧ ಚರ್ಚೆಗೆ ಹೋಗಿದ್ದರು ವಾಪಾಸ್ ಬಂದಿದ್ದಾರೆ. ಆದರೆ ಬಂಧನವಾಗಿಲ್ಲವೆಂದು ಸ್ಪಷ್ಟಪಡಿಸಿದರು.

ನೆಲದ ಕಾನೂನು ಗೌರವಿಸುವೆ; ಮಠದ ಶ್ರೀ ಗಳ ನುಡಿ

ಚಿತ್ರದುರ್ಗ:- ಚಿತ್ರದುರ್ಗ ಮಠದ ಶ್ರೀಗಳು ಮಠದ ಆವರಣದಲ್ಲಿ ಜಮಾಯಿಸಿದ ಅಪಾರ ಸಂಖ್ಯೆಯ ಭಕ್ತರು ಹಾಗೂ ಮಾಧ್ಯಮರನ್ನೂ ಉದ್ದೇಶಿಸಿ, ಈ ಹಿಂದಿನಿಂದಲೂ ಮಠದ ಆಂತರಿಕವಾಗಿ ನೆಡೆಯುತ್ತಿದ್ದ ಗೊಂದಲ ಈಗ ಬಹಿರಂಗವಾಗುತ್ತಿದೆ. ಶ್ರೀ ಮಠಕ್ಕೆ ಕಪ್ಪು ಚುಕ್ಕೆ ತರಲು ಷಡ್ಯಂತ್ರ ನೆಡೆಯುತ್ತಿದೆ.

ಪಲಾಯನ ವಾದ ಪ್ರೆಶ್ನೆಯೇ ಇಲ್ಲಾ.  ಶ್ರೀ ಮಠ ಸಂಚಾರಿ ನ್ಯಾಯಾಲಯವಾಗಿದೆ.ಶ್ರೀ ಮಠದ ಭಕ್ತರು ಶಾಂತಿ ಸಂಯಮ ಕಾಪಾಡಲಿ, ನಾನು ಆರೋಪ ಮುಕ್ತನಾಗಿ ಹೊರ ಬಂದೇ ಬರುತ್ತೇನೆ ಎಂದರು.

ಮುರುಘಾ ಮಠದ ನೋವೇ ನಮ್ಮ ನೋವು ನಮ್ಮ ನೋವು ಎಂದೂ ಆಗಮಿಸಿದ ಭಕ್ತರನ್ನೂ ಕಂಡು ಗದ್ಗರಿತವಾಗಿ ಶ್ರೀ ಗಳು ನುಡಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.