ಸ್ವಾತಂತ್ರ್ಯ ಪೂರ್ವದಲ್ಲಿ ಜನರಿಗೆ ಏಕತೆ ಮುಖ್ಯವಾಗಿತ್ತು : ಬಿ. ವೈ. ರಾಘವೇಂದ್ರ

ಶಿವಮೊಗ್ಗ : ವಿಶ್ವ ಮಾನವ ಸಂದೇಶವನ್ನು ಕೊಟ್ಟ ರಾಷ್ಟ್ರ ಕವಿ ಕುವೆಂಪು ಅವರ ಜಿಲ್ಲೆ ನಮ್ಮ ಶಿವಮೊಗ್ಗ, ಅನೇಕ ಶಿವ ಶರಣರ ನಾಡು ನಮ್ಮದು, ಭಾವೈಕ್ಯತೆಗೆ ಹೆಸರಾದ ಜಿಲ್ಲೆ,ಸ್ವಾತಂತ್ರ್ಯ ಪೂರ್ವದಲ್ಲಿ ಜನರಿಗೆ ಏಕತೆ ಮುಖ್ಯವಾಗಿತ್ತು, ದೇಶ ವಿಭಜನೆಯ ನಂತರ ವಿವಿಧ ರಾಜಕಾರಣಿಗಳಿಂದ ಸೌಹಾರ್ದತೆ ಕಡಿಮೆಯಾಗಿದೆ, ಈಗಲೂ ಅವಕಾಶವಿದೆ ಸಮಾಜದಲ್ಲಿ ನಮ್ಮ ಹಿಂದುಗಳ ಮದುವೆ ಇನ್ನಿತರ ಸಮಾರಂಭದಲ್ಲಿ ನೀವೂ ಬಂದು ನಿಮ್ಮ ಕಾರ್ಯಕ್ರಮಕ್ಕೆ ನಾವು ಬರುವ ಮೂಲಕ ಭಾವೈಖ್ಯತೆ ಮೆರೆಯಬಹುದು ಎಂದು ಸಂಸದರಾದ ಬಿ. ವೈ. ರಾಘವೇಂದ್ರ ತಿಳಿಸಿದರು.

ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ನೆಡೆದ ಸೌಹಾರ್ದ ಸಹ ಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮಲ್ಲಿ ಇರುವ ರಕ್ತದಲ್ಲಿ ಜಾತಿಯಿಲ್ಲ, ಉಸಿರಾಡುವ ಗಾಳಿ, ನೆಡೆದಾಡುವ ನೆಲದಲ್ಲಿ ಬೇದ ಭಾವವಿಲ್ಲ, ಈ ಪುಣ್ಯಭೂಮಿ ಭಾರತದಲ್ಲಿ ಇರುವ ನಾವೆಲ್ಲರೂ ಭಾರತೀಯರು, ರಾಷ್ಟ್ರೀಯತೆ ವಿಚಾರದಲ್ಲಿ ನಾವೆಲ್ಲರೂ ದೇಶದ ಜೊತೆಗೆ ದೃಢವಾಗಿ ನಿಲ್ಲಬೇಗಿದೆ, ಸಮಾಜ ಘಾತುಕ ಶಕ್ತಿಗಳಿಗೆ ಒಗ್ಗಟ್ಟಿನಿಂದ ಎದುರಿಸಬೇಕಿದೆ, ನಮ್ಮ  ಶ್ರೇಷ್ಠ ಸಂವಿಧಾನವು ಅನೇಕ ಅವಕಾಶ ಮತ್ತು ಆಯ್ಕೆಯನ್ನು ನೀಡಿದೆ, ಆದರೆ ನೆಲದ ಕಾನೂನಿಗೆ ಎಲ್ಲರು ತಲೆಬಾಗಲೇ ಬೇಕು, ಎಲ್ಲಾ ವಿಷಯಕ್ಕಿಂತ ದೇಶ ಮೊದಲು ಎಂಬ ಭಾವ ನಮ್ಮಲ್ಲಿ ಬರಬೇಕು ಎಂದು ಹೇಳಿದರು.

ಮೌಲಾನಾ ಶಾಹುಲ್ಲಾ, ಫಾದರ್ ರೊನಾಲ್ಡೊ, ಶ್ರೀಪಾಲ್, ಬಸವರಾಜಪ್ಪ,  ಶ್ರೀಕಾಂತ್, ರಮೇಶ್,  ಮಂಜುನಾಥ್,  ಶಿವಕುಮಾರ್ ಇತರರು ಉಪಸ್ಥಿತಿಯಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.