ಹೊಳೆಹೊನ್ನುರು ಪೊಲೀಸರ ಕಾರ್ಯಾಚರಣೆ;ನಾಪತ್ತೆಯಾಗಿದ್ದ 70 ಲಕ್ಷ ರೂ. ಮೌಲ್ಯದ ಅಡಕೆ ಚೀಲಗಳ ತುಂಬಿದ ಲಾರಿ ಪತ್ತೆ ಹಚ್ಚುವಲ್ಲಿ ಯಶಸ್ವಿ

ಶಿವಮೊಗ್ಗ;  ಕಳೆದ ಎರಡೂವರೆ ತಿಂಗಳ ಹೊಳೆಹೊನ್ನೂರು ಸಮೀಪದ ಗುಡುಮಗಟ್ಟೆಯ ಅಡಕೆ ಗೋದಾಮಿನಿಂದ 70 ಲಕ್ಷ ರೂ. ಮೌಲ್ಯದ ಅಡಕೆ ಚೀಲಗಳನ್ನು ತುಂಬಿದ ಲಾರಿಯನ್ನು ಹೈಜಾಕ್ ಮಾಡಲಾಗಿತ್ತು.ಇದೀಗ ಸದರಿ ಹೈಜಾಕ್ ಮಾಡಲಾದ ಲಾರಿ ಹಾಗೂ 256 ಅಡಿಕೆ ಚೀಲಗಳನ್ನ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಹೊಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.

 ಆದರೆ ಈ ಪ್ರಕರಣದಲ್ಲಿ  ಲಾರಿ ಚಾಲಕರಿಬ್ಬರು ಪರಾರಿಯಾಗಿರುವುದಾಗಿ  ತಿಳಿದು ಬಂದಿದೆ.

ಸೆಪ್ಟೆಂಬರ್ 13ರಂದು ಶಿವಮೊಗ್ಗದ ವರ್ಮಾ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಲಾರಿ ಗಡುಮಗಟ್ಟೆಯಿಂದ 70 ಲಕ್ಷ ರೂ. ಮೌಲ್ಯದ 256 ಅಡಕೆ ಚೀಲಗಳನ್ನು ತುಂಬಿಕೊಂಡು ಮಹಾರಾಷ್ಟ್ರದ ನಾಗಪುರದ ಕಡೆ ಹೊರಟಿತ್ತು. ಆದರೆ ತಲುಪಬೇಕಾದ ಜಾಗವನ್ನು ತಲುಪದ ಲಾರಿಯನ್ನು ಚಾಲಕ ಭೀಮಾ ಕಾಳೆ ಹಾಗೂ ದಾದಾ ಪವಾರ್ ಮಹಾರಾಷ್ಟ್ರದ ಬೇರೊಂದು ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಅಡಕೆಯನ್ನು ಮಲ್ಕಾಪುರ್ ಮೂಲದ ಶಿವಾಜಿರಾವ್ ಎಂಬುವವರಿಗೆ ಮಾರಾಟ ಮಾಡಿದ್ದರು.

ಹೊಳೆಹೊನ್ನೂರು ಪೊಲೀಸರು ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆದು ಅಡಿಕೆ ಖರೀದಿಸಿದ ಶಿವಾಜಿರಾವ್ ಆಲಿಯಾಸ್ ಬಬ್ಲುವನ್ನು ಬಂಧಿಸಿ ಅಡಕೆ ಮತ್ತು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಚಾಲಕ ಭೀಮಾ ಕಾಳೆ ಹಾಗೂ ದಾದಾ ಪವಾರ್ ತಲೆಮರೆಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಉಸ್ಮಾನ್‌ಬಾದ್ ಜಿಲ್ಲೆಯ ಯರಮಾಲ ಪೋಲಿಸ್ ಠಾಣೆ ಸಿಬ್ಬಂದಿ ನೆರವಿನಿಂದ 

ಡಿವೈಎಸ್ಪಿ ಕೃಷ್ಣಮೂರ್ತಿ, ಭದ್ರಾವತಿ ಗ್ರಾಮಾಂತರ ಸಿಪಿಐ ಹಾಗೂ ಹೊಳೆಹೊನ್ನೂರು ಪಿಎಸ್‌ಐ ಸುರೇಶ್ ನೇತೃತ್ವದ ತಂಡ ಪ್ರಕರಣವನ್ನು ಭೇದಿಸಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.