ಬಾಲಾ ಕಾರ್ಮಿಕತೆ ಕಥಾಹಂದರದ ಚಿತ್ರ :"ಚನ್ನ ":ಭಾರ್ಗವಿ, ಜಿ, ಆರ್ ಪತ್ರಿಕೋದ್ಯಮ ವಿದ್ಯಾರ್ಥಿ
ವಿಜೆ ಬಾಲಾಜಿ ಪ್ರಸಾದ್ ಅವರಿಂದ ಕರ್ನಾಟಕದ ಪ್ರಶಸ್ತಿ ವಿಜೇತ ಕಿರು ಚಿತ್ರ ಚನ್ನವು, ಜೀವನ ಶೈಲಿಯ ಕುರಿತಾಗಿದೆ.ಚನ್ನ ಮತ್ತು ಆತನ ಸ್ನೇಹಿತರು ಸ್ಥಳೀಯ ಡಂಪ್ ಯಾರ್ಡ್ನಿಂದ ಕಸ ಸಂಗ್ರಹಿಸುವ ಮೂಲಕ ಜೀವನ ಸಾಗಿಸುತ್ತಿರುತ್ತಾರೆ. ನಿಯಮಿತ ದಿನವಾಗಿರಬೇಕಾಗಿರುವುದು ಹುಡುಗರ ಜೀವನವನ್ನು ಬದಲಾಯಿಸುವ ಘಟನೆಯಾಗಿದೆ. ಅವರಿಗೆ ಕಾದಿರುವ ಸವಾಲುಗಳನ್ನು ಅವರು ಹೇಗೆ ಎದುರಿಸುತ್ತಾರೆ, ಎಂಬ ಭಾವನಾತ್ಮಕ ಕಂಥಾಹಂದರದ ಕಿರು ಚಿತ್ರವಾಗಿದೆ.
ಚಿತ್ರಕಥೆ ಮತ್ತು ನಿರ್ದೇಶನವನ್ನು -ವಿಜೆ ಬಾಲಾಜಿ ಪ್ರಸಾದ್, ನಿರ್ಮಾಣದಲ್ಲಿ ಶರತ್ ವೆಲಿಕ್ಕಾಡನ್ ಮತ್ತು ಮನು ತೆಕ್ಕೆದಿಲ್,ಛಾಯಾಗ್ರಹಣ ನಿರ್ದೇಶಕರಾಗಿ -ಶರತ್ ವೆಲಿಕ್ಕಡನ್,ಸಂಗೀತ ನಿರ್ದೇಶಕರಾಗಿ -ಮುಖೇಶ್ ಮುರಳೀಧರನ್,ಯೋಜನೆಯ ವಿನ್ಯಾಸವನ್ನು - ಬೋರ್ಡ್ ರೂಮ್,ಸಹನಿರ್ದೇಶಕರು -ಅನೂಪ್ ಶೂನ್ಯಾ, ಸಿಬಿನ್ ಎ.ಜೆ, ಹರ್ಷವರ್ಧನ ಎಚ್.ಎನ್.
ಸಂಪಾದಕರಾಗಿ -ಸನತ್ ಸುಗತನ್ ಅಸೋಸಿಯೇಟ್, -ಆಲ್ವಿನ್ ರೋಡ್ರಿಗಸ್,-ಜೆನೀತ್ ಕಿರಣ್ ಕಾರ್ಯಕಾರಿ ನಿರ್ಮಾಪಕ -ಪ್ರಜ್ವಲ್ ಎಚ್.ಜಿ,ಕ್ರಿಯೇಟಿವ್ ಡೈರೆಕ್ಟರ್ -ಅಖಿಲ್ ಜಿ ಕುಮಾರ್,
ಮೇಲಿನ ಪ್ರತಿಯೊಬ್ಬರ ಪ್ರಯತ್ನದ ಫಲವೆ ಚನ್ನ ಎಂಬ ಅದ್ವತ ಕಿರುಚಿತ್ರ.ಆಸೆ ಎಂಬ ಕುದುರೆ ಏರಿ ನಡೆಯುವ ಚನ್ನನಿಗೆ ದೊರೆತ್ತದ್ದು, ಭಯ, ಗೊಂದಲ ಹಾಗೂ, ತಾಯಿಯ ಮಹತ್ವದ ಅರಿವು,
ಸೂಕ್ಷ್ಮವಾಗಿ ಗಮನಿಸಿದರೆ ಸ್ನೇಹದ ಮೌಲ್ಯವನ್ನು ಕಾಣಬಹುದು, ಸಾಮಾನ್ಯ ಭಾಷಾ ಬಳಕೆ ಮತ್ತು ಸರಳವಾಗಿ ಚಿತ್ರೀಸಿರುವ ಅದೆಷ್ಟೋ ಪ್ರಮುಖ ಅಂಶಗಳನ್ನು ಒಳಗೊಂಡಿದೆ, ಚಿತ್ರದ ಅಂತಿಮ ಘಟದಲ್ಲಿ ಬಾಲಕಾರ್ಮಿಕತೆ ತೊಲಗಿಸಿ ಪ್ರತಿ ಜೀವಿಗೂ ಶಿಕ್ಷಣ ಮತ್ತು ಮಾನವ ಹಕ್ಕು ಮುಖ್ಯ ಎಂದು ತೋರಿಸಿಕೊಡುವ ಚನ್ನ ಸಿನಿಮಾ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ.
ಮಕ್ಕಳ ಮತ್ತು ಹದಿಹರೆಯದವರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ 1986. ಈ ಕಾಯಿದೆಯು ಬಾಲಕಾರ್ಮಿಕರ ಸಮಸ್ಯೆಗೆ ಸಂಬಂಧಿಸಿದೆ, ಇದು ಸಾಮಾಜಿಕ ಸಮಸ್ಯೆಯಾಗಿದೆ. ಈ ಕಾಯಿದೆಯು ಕೆಲವು ಉದ್ಯೋಗಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ನೇಮಿಸಿಕೊಳ್ಳುವುದನ್ನು ನಿಷೇಧಿಸುತ್ತದೆ ಜೊತೆಗೆ ಬಾಲಾ ಕಾರ್ಮಿಕ ಕಾಯ್ದೆ ಉಲಂಘಿಸಿದರೆ 20000 ದಿಂದ 50000 ರೂ ದಂಡ ವಿಧಿಸಬಹುದಾಗಿದ್ದರು ಕೆಲವೊಂದು ಕಡೆಗೆಗಳಲ್ಲಿ ಬಾಲ್ಯ ಕಾರ್ಮಿಕರನ್ನು ಕಾಣಬಹುದಾಗಿದೆ.
ಇಂತಹ ಸಮಾಜಕ್ಕೆ ಮತ್ತು ವಿಶೇಷವಾಗಿ ದೇಶದ ಭವಿಷ್ಯವಾದ ಮಕ್ಕಳ ಬಗೆಗಿನ ಸಂದೇಶ ಸಾರುವ ಚನ್ನ ಚಿತ್ರವನ್ನು ನೋಡುವ ಮೂಲಕ ಹೊಸ ಕಲಾವಿದರನ್ನು ಉಳಿಸಿ ಬೆಳೆಸೋಣ.
ಭಾರ್ಗವಿ, ಜಿ, ಆರ್
ಪತ್ರಿಕೋದ್ಯಮ ವಿದ್ಯಾರ್ಥಿ
ಕುವೆಂಪು ವಿವಿ
Leave a Comment