ಜೂನ್ 9 ರಂದು,ಐಲೆಟ್ಸ್ ಡಯಾಬಿಟಿಸ್ ಆಸ್ಪತ್ರೆಯಲ್ಲಿ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರ

ಶಿವಮೊಗ್ಗ: ಪ್ರತಿ ತಿಂಗಳ ಎರಡನೇ ಶುಕ್ರವಾರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಪ್ರಮುಖ ವಾಸ್ಕ್ಯುಲರ್ ಸರ್ಜರಿ ತಜ್ಞರಾದ ಡಾ.ರಾಹುಲ್ ಎನ್.ಎಸ್ ರವರು ಶಿವಮೊಗ್ಗಕ್ಕೆ ಬರಲಿದ್ದಾರೆ.ಮಣಿಪಾಲ್ ಆಸ್ಪತ್ರೆ ಬೆಂಗಳೂರು ಅವರ ಸಹಯೋಗದಲ್ಲಿ ಐಲೆಟ್ಸ್ ಡಯಾಬಿಟಿಸ್  ಆಸ್ಪತ್ರೆ ಯಲ್ಲಿ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರವನ್ನು ಜೂನ್ 9 ರಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ ಎಂದು ಐಲೆಟ್ಸ್ ಡಯಾಬಿಟಿಸ್ ಆಸ್ಪತ್ರೆ ಎಂ.ಡಿ.ರವರಾದ ಡಾ.ಪ್ರೀತಂ.ಬಿ ಹೇಳಿದರು.

ಅವರು  ಇಂದು ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ಶಿವಮೊಗ್ಗದ  ಸಾಗರ ರಸ್ತೆಯಲ್ಲಿ ಆಯನೂರು ಗೇಟ್ ಹತ್ತಿರ ಇರುವ ಐಲೆಟ್ಸ್ ಡಯಾಬಿಟಿಸ್ ಆಸ್ಪತ್ರೆಯಲ್ಲಿ ಡಾ.ರಾಹುಲ್ ರವರು ತಪಾಸಣೆ ನಡೆಸಲಿದ್ದಾರೆ ಎಂದರು.

ಉಬ್ಬಿರುವ ರಕ್ತನಾಳಗಳು, ಮಧುಮೇಹ ದಿಂದ ಕಾಲಿನಲ್ಲಿ ವಾಸಿಯಾಗದ ಗಾಯಗಳು, ಕೈ ಮತ್ತು ಕಾಲುಗಳ ಊತ ಮತ್ತು ನೀವು ಹಾಗೂ ಕಾಲ್ಬೆರಳುಗಳ ಬಣ್ಣ ಬದಲಾವಣೆ, ಗ್ಯಾಂಗ್ರಿನ್ ಮತ್ತು ಇನ್ನು ಅನೇಕ ಸಮಸ್ಯೆ ಗಳಿಗೆ ತಪಾಸಣೆಯನ್ನು ಮಾಡಲಿದ್ದಾರೆ.ಉಚಿತ ಕಾಲಿನ ನರಗಳ ಪರೀಕ್ಷೆ ಮಾಡಲಿದ್ದಾರೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ ಎಂದರು.

ಡಯಾಬಿಟಿಸ್ ರೋಗಿಗಳಿಗೆ ವಿಶೇಷವಾಗಿ ತಯಾರಿಸಲಾಗಿರುವ ಆಹಾರ ಕೇವಲ ರೂ.500/- ಕ್ಕೆ ಆಸ್ಪತ್ರೆಯಲ್ಲಿ ಕೊಡಲಾಗುತ್ತದೆ. ಮತ್ತು ಉಚಿತ ಕಣ್ಣಿನ ತಪಾಸಣೆ ಮತ್ತು ವಾರ್ಷಿಕ ಹೆಲ್ತ್ ಕಾರ್ಡ್ ಸಹ ವಿತರಣೆ ಮಾಡಲಾಗುತ್ತದೆ. ಡಯಾಬಿಟಿಸ್ ರೋಗಿಗಳು ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ಮಾಡಿಸಿಕೊಳ್ಳಿ ಎಂದರು.
 ಈ ಸಂದರ್ಭದಲ್ಲಿ ಆಸ್ಪತ್ರೆಯ  ಡಾ. ಪಲ್ಲವಿ ವಿನಯ್ ಮ್ಯಾನೇಜರ್, ಚೇತನ್,ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.