ಶಿವಮೊಗ್ಗದಲ್ಲಿ ಶಾಂತಿತರಬೇಕು, ಹೊಸ ವಿನ್ಯಾಸ- ರೂಪ ತರಬೇಕು ಎನ್ನುವುದು ಪ್ರಥಮ ಆದ್ಯತೆ:ಆಯನೂರು ಮಂಜುನಾಥ್

ಶಿವಮೊಗ್ಗ:  ಶಿವಮೊಗ್ಗ ನಗರ ಅಶಾಂತಿನಗರವಾಗಿದೆ.
ಶಿವಮೊಗ್ಗ ದಲ್ಲಿ ವಾತಾವರಣ ಬದಲಾಯಿಸಬೇಕು. ಇಲ್ಲದಿದ್ದರೆ ಶಿವಮೊಗ್ಗ ಬರಡು ಜಿಲ್ಲೆಯಾಗುತ್ತದೆ. ಶಿವಮೊಗ್ಗದಲ್ಲಿ ಶಾಂತಿತರಬೇಕು, ಹೊಸ ವಿನ್ಯಾಸ ರೂಪ ತರಬೇಕು  ಎನ್ನುವುದು ಪ್ರಥಮ ಆದ್ಯತೆ ಆಗಿದೆ. ಶಿವಮೊಗ್ಗದಲ್ಲಿ ಅಶಾಂತಿ ಉಂಟು ಮಾಡಿದವರ ಮೇಲೆ ವಾಗ್ದಾಳಿ ನಡೆಸಿ ಹೋರಾಟ ಮಾಡಿ ಚುನಾವಣೆಗೆ ಸ್ಪರ್ದಿಸಿದ್ದೆನೆ.ಇತ್ತಿಚೆಗೆ ರಾಜ್ಯದಲ್ಲಿ  ಗ್ಲೋಬಲ್ ಇನ್ವಸ್ಟರ್ ಮೀಟ್ ಆಯಿತು, ಆದರೆ ಪ್ರಬಾವಿನಾಯಕರು ಶಿವಮೊಗ್ಗದಲ್ಲಿ ಇದ್ದರೂ ಯಾರು ಇನ್ವೆಸ್ಟ್ ಮಾಡಲು ಬರಲಿಲ್ಲ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.

ಇಂದು ಬೆಳಿಗ್ಗೆ ಪತ್ರಿಕಾ ಭವನದಲ್ಲಿ ಆಯೋಜಿಸಿದ ಪತ್ರಿಕಾ ಸಂವಾದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
ನನಗೆ ಶಾಸಕ ಸ್ಥಾನ ಹೊಸದಲ್ಲ,ಲೋಕಸಭೆ ರಾಜ್ಯಸಭೆ,ವಿದಾನಪರಿಷತ್ ಸದನದ ಮನೆಗಳಲ್ಲಿ ಕೆಲಸ ಮಾಡಿದ್ದೆನೆ. ಅಗತ್ಯ ಬಿದ್ದಾಗ ಆಡಳಿತ ಪಕ್ಷದಲ್ಲಿದ್ದರೂ ಸಹ ಕಾರ್ಮಿಕರ ಸಮಸ್ಯೆ ಮತ್ತು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಂಡಿಸಿದ್ದೆನೆ.ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿ ಗಮನ ಸೆಳೆದಿದ್ದೆನೆ ಎಂದರು.

 ಕಾರ್ಮಿಕ ಹಿನ್ನೆಲೆ ಯುಳ್ಳ ನನಗೆ ಕಾರ್ಮಿಕರ ಮತ್ತು ಬಡವರ ಕಷ್ಟ ಗೊತ್ತು. ಕೊರಾನ ಸಂದರ್ಭ, ಕೋಮು ಗಲಭೆಗಳು ಸಂಕಷ್ಟ ತಂದೊಡ್ಡಿವೆ. ಇದು ಶಿವಮೊಗ್ಗ ನಗರಕ್ಕೆ ಕಪ್ಪು ಚುಕ್ಕೆ. ಕೆಲವು ನಾಯಕರ ಹಪಾಹಪಿತನದಿಂದ ಶಿವಮೊಗ್ಗ ಹಾಳಾಗಿದೆ ಸುರಕ್ಷಿತ ವಾತಾವರಣ ಇಲ್ಲ. ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕು ಎಂದರು.

 ಶಿವಮೊಗ್ಗಕ್ಕೆ  ಕೈಗಾರಿಕೆಗಳು ಬರುತ್ತಿಲ್ಲ, ನಮ್ಮ ಮಕ್ಕಳಿಗೆ ಉದ್ಯೋಗ ವಿಲ್ಲ. ನಿರುದ್ಯೋಗ ಸಮಸ್ಯೆ, ಶಿವಮೊಗ್ಗ ನಗರವನ್ನು ಸುರಕ್ಷಿತ ನಗರವನ್ನಾಗಿ ಮಾಡಲು ನನ್ನ ಪ್ರಥಮ ಆದ್ಯತೆ.ಶಿವಮೊಗ್ಗದಲ್ಲಿ ಆಸ್ಪತ್ರೆಗಳು ಇದ್ದಾವೆ. ಖರ್ಚಿಗೆ ದಾರಿ ಇದೆ. ದುಡಿಮೆಗೆ ಆದಾಯಕ್ಕೆ ಯಾವುದೇ ದಾರಿ ಇಲ್ಲ ಎಂದರು.

 ಶಿವಮೊಗ್ಗದಲ್ಲಿ  ಉತ್ತಮವಾದ ಮತ್ತೊಂದು ಸರ್ಕಾರಿ ಶಾಲೆಗಳು ತೆರೆಯುವುದಕ್ಕೆ ಆಗಿಲ್ಲ.ಆದರೇ ಖಾಸಗಿ ಶಾಲೆಗಳು ಪ್ರತಿವರ್ಷ ಅತ್ಯುತ್ತಮವಾದ ದುಬಾರಿ ಕಾಲೇಜುಗಳು ಪ್ರಾರಂಭವಾಗಿವೆ ಎಂದರು.

 ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಸರಿಯಾಗಿಲ್ಲ. ಕಳಪೆಯಾಗಿದೆ. ಅಗೆಯುವುದೇ ಒಂದು ದೊಡ್ಡ ಕಾಮಗಾರಿ ಯಾಗಿದೆ. ಬ್ರಷ್ಟಚಾರ ತಾಂಡವಾಡಿದೆ‌.ಶಿವಮೊಗ್ಗ ನಗರದಲ್ಲಿ ಜನರಿಗೆ ಮನ್ನಣೆ ಇಲ್ಲ. ಪ್ರತಿವಾರ್ಡ್ ನಲ್ಲಿ ಕಾರ್ಪೊರೇಟ್ ರ್ ಮುಖ್ಯಸ್ಥನಲ್ಲ. ಆ ವಾರ್ಡ್ನ ನಾಗರೀಕರು ಸಮಿತಿಯವರು ಮುಖ್ಯ. ಅವರ ಅಭಿಪ್ರಾಯ ಪಡೆದು ಅಭಿವೃದ್ಧಿ ಕಾರ್ಯವಾಗಬೇಕು.

 ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ  ಆಡಳಿತ ವ್ಯವಸ್ಥೆ ವಿಭಜನೆ ಮಾಡಿದರೇ ಜನರಿಗೆ ಉತ್ತಮ ಸೇವೆ ಲಬ್ಯವಾಗುವ ಅವಕಾಶವಿದೆ ಎಂದರು.

 ನನ್ನ ಈಗಿನ ವಿಧಾನಸಭೆಯ ಎದುರು ಸ್ಪರ್ದಿಗಳು ತಾವು ಕಾರ್ಪೊರೇಟ್ ರ್ ಆದಾಗ ಮಾಡಿದ ಕಾರ್ಯ ನೋಡಿದಾಗ  ಪ್ರಭುದ್ದತೆ ಕಂಡು ಬಂದಿಲ್ಲ.ಬ್ಯಾರಿ ಮಾಲ್, 99 ವರ್ಷಕ್ಕೆ ಬರೆದು ಕೊಡುವ ಕೆಲಸ ಆಯ್ತು...ಮೇಯರ್ ಗೊತ್ತಿಲ್ಲ ಅಂದ್ರು.ಹತ್ತು ಹಲವು ಸಂಗತಿಗಳು ಇವೆ. ಎಂದು ವ್ಯಂಗ್ಯವಾಡಿದರು. 

ಈ ಸಂದರ್ಭದಲ್ಲಿ ಪ್ರೆಸ್‌ ಟ್ರಸ್ಟ್ ಅದ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಗೋಪಾಲ್ ಯಡಗೇರೆ,ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಹಾಜರಿದ್ದರು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.