ಶಿವಮೊಗ್ಗಕ್ಕೆ ಚಾಕು-ಚೂರಿ ಬೇಕಾಗಿಲ್ಲ- ಶಾಂತಿ, ಸಾಮರಸ್ಯದ ಸಂಸ್ಕೃತಿ ಬೇಕು.ವೈ.ಹೆಚ್.ನಾಗರಾಜ್

ಶಿವಮೊಗ್ಗ:ಶಿವಮೊಗ್ಗಕ್ಕೆ ಬೇಕಾಗಿರುವುದು ಚಾಕು, ಚೂರಿ 
ಸಂಸ್ಕೃತಿಯಲ್ಲ ಶಾಂತಿ, ಸಾಮರಸ್ಯದ ಸಂಸ್ಕೃತಿ ಬೇಕು ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದರು.
 ಇಂದು ಅವರು ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸು
 ಮಾತನಾಡಿ, ಶಾಂತವಾಗಿದ್ದ ಶಿವಮೊಗ್ಗ ನಗರದಲ್ಲಿ ಪ್ರಚೋದನೆ ಹೇಳಿಕೆಗಳ ಮೂಲಕ ಅಶಾಂತಿಯನ್ನು ಹುಟ್ಟಿಸಿದ್ದು ಶಾಸಕ ಕೆ.ಎಸ್. ಈಶ್ವರಪ್ಪ, ಅದರ ಮುಂದುವರೆದ ಭಾಗವಾಗಿ ಭೋಪಾಲ್ ಸಂಸದ 
ಸಾಧಿ ಪ್ರಜ್ಞಾಸಿಂಗ್ ಅವರನ್ನು ಶಿವಮೊಗ್ಗಕ್ಕೆ ಕರೆತಂದು ಅವರಿಂದ ಚಾಕು, ಚೂರಿಯ ಮಾತುಗಳನ್ನಾಡಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈಶ್ವರಪ್ಪ ಮುಂದಾಗಿರುವುದು ವಿಷಾದನೀಯ ಎಂದರು. 
ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಅವರು 
ಪ್ರಮಾಣ ವಚನ ಸ್ವೀಕರಿಸುವಾಗ ಈ ದೇಶದ ಸಮಗ್ರತೆ ಮತ್ತು ಐಕ್ಯತೆ ಕಾಪಾಡಿ ಸಂವಿಧಾನಪೂರ್ವಕವಾಗಿ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. 
ಆದರೆ, ಶಿವಮೊಗ್ಗದಲ್ಲಿ ಹಿಂದೂ ಜಾಗರಣಾ ಸಮಿತಿ ಏರ್ಪಡಿಸಿದ್ದ ಸಭೆಯಲ್ಲಿ ಚಾಕು ಸಂಸ್ಕೃತಿಯ ಮಾತನಾಡಿದ್ದಾರೆ. ಪ್ರತಿಯೊಬ್ಬಹೆಣ್ಣು ಮಕ್ಕಳ ಕೈಯಲ್ಲೂ ಚಾಕು ಇರಬೇಕು ಎನ್ನುವುದು ಅವರ ಪ್ರಚೋದನ ಭಾಷಣವಾಗಿದೆ. ಸಂಸದೆಯಾಗಿ ಅವರು ಈ ರೀತಿ ಮಾತನಾಡಿರುವುದು ತಪ್ಪಾಗಿದೆ ಎಂದರು

ಈಗಾಗಲೇ ಕಾಂಗ್ರೆಸ್ ಅವರ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 
ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ. ಶಿಕ್ಷಣ ಸಂಸ್ಥೆಗಳು ಎಲ್ಲಾ ಧರ್ಮ, ಜಾತಿಗಳನ್ನು ಮೀರಿದೆ. ಆದರೆ, ಇವರು ಅದನ್ನು ಧರ್ಮದ ಚೌಕಟ್ಟಿನಲ್ಲಿ ಬಂಧಿಸಿಟ್ಟಿರುವುದು ಅಪಚಾರವಾಗಿದೆ 
ಎಂದರು. 
ಸರ್ಕಾರಿ ನೌಕರರ ಹಳೆ ಪಿಂಚಣಿ 
ವ್ಯವಸ್ಥೆ ಜಾರಿಗೊಳಿಸಲು ಈ ಬಾರಿ ಅಧಿವೇಶನದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಶಿವಮೊಗ್ಗದ ಒಂದಿಬ್ಬರು ಶಾಸಕರನ್ನು ಬಿಟ್ಟರೆ ಈಶ್ವರಪ್ಪ ಸೇರಿದಂತೆ ಎಲ್ಲಾ ಶಾಸಕರು ಈ ಬಗ್ಗೆ ಗಮನಹರಿಸಲಿಲ್ಲ. ಈಗಲಾದರೂ, ಸೇರಿರುವ ಸರ್ಕಾರಿ ನೌಕರರ ಬಗ್ಗೆ 
ಸರ್ಕಾರ ಹೊಸದಾಗಿ 
ಗಮನಹರಿಸಬೇಕು ಎಂದರು. 
ಪ್ರಜ್ಞಾಸಿಂಗ್ ಅವರು ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಕ್ರಿಶ್ಚಿಯನ್ ಮಿಷನರಿ ಶಾಲೆಗಳಿಗೆ ಕಳಿಸಬೇಡಿ ಎಂದು ಹೇಳಿದ್ದಾರೆ. ಹೀಗೆ ಹೇಳುವ ಹಕ್ಕನ್ನು ಅವರಿಗೆ ಕೊಟ್ಟವರು ಯಾರು ಯಾರೋ ಸಾಮಾನ್ಯ ಪ್ರಜೆಯಾಗಿ ಹೇಳಿದ್ದರೆ ಸುಮ್ಮನಿರ ಬಹುದಿತ್ತು. ಆದರೆ, ಪ್ರಜಾತಂತ್ರದ ಭಾಗವಾಗಿ ಈ ರೀತಿ ರುದ್ರೇಶ್ ಇದ್ದರು. 
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಪಿ. ದಿವಾಕರ್, ಹೆಚ್.ಪಿ.ರುದ್ರೇಶ್ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.