ಕೋವಿಡ್ ಮುಂಜಾಗ್ರತೆ ವಹಿಸಿ ಲಸಿಕೆ ಪಡೀಯಿರಿ: ಜಿ.ಪಂ. ಸಿಇಓ*

ಶಿವಮೊಗ್ಗ:  ಡಿ.೨೫ ರಂದು ಜಿಲ್ಲಾಪಂಚಾಯತ್ ಶಿವಮೊಗ್ಗ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನಿರ್ವಾಹಕ ಎನ್.ಡಿ. ಪ್ರಕಾಶ್ ರವರು  ಶಿವಮೊಗ್ಗ ಜಿಲ್ಲೆಯ ಎಲ್ಲಾ ತಹಸೀಲ್ದಾರ್, ಇಓ, ಬಿಇಒ ಮತ್ತು ಟಿಹೆಚ್ ಒ ಗಳಿಗೆ ಜೂಮ್ ವಿಸಿ ಮುಖಾಂತರ  ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತು ವಿವರವಾಗಿ  ಮಾಹಿತಿ ನೀಡಿದರು. ಎಲ್ಲಾ  ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಯಲ್ಲಿ ಇರುವ  ಆಕ್ಸಿಜನ್  ಸರಬರಾಜು, ಐಸಿಯು ಬೆಡ್ ಕಾಯ್ದೆರಿಸುವ ಬಗ್ಗೆ ಹಾಗೂ ಕೋವಿಡ್ ಲಸಿಕೆ ಮುಂಜಾಗೃತ ಡೋಸ್ ಶೇ.100 ರಷ್ಟು ನೀಡಲು ಸೂಚಿಸಿದರು.
ಡಿಹೆಚ್ಒ ರಾಜೇಶ್ ಸುರಗಿಹಳ್ಳಿ  ಮಾತನಾಡಿ  ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಜಾಸ್ತಿ ಮಾಡಲು ಸೂಚಿಸಿ  ಟೆಸ್ಟ್, ಟ್ರ್ಯಾಕ್, ಟ್ರೀಟ್  ಪದ್ಧತಿ ಅಳವಡಿಸಿ ಹಾಗೂ  ಸಾಮಾಜಿಕ ಅಂತರ ಕಾದುಕೊಳ್ಳುವುದು, ಮಾಸ್ಕ್ ಧರಿಸುವುದು  ಸೀತ ನೆಗಡೆ, ಜ್ವರ ಬಂದಂತವರು  ತಕ್ಷಣ ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷೆ  ಮಾಡಿಸಲು  ತಿಳಿಸಿದರು.
      ಆರ್ ಸಿಹೆಚ್ಒ
ಡಾ.ನಾಗರಾಜ್ ನಾಯ್ಕ್ ಮಾತನಾಡಿ  ಜಿಲ್ಲೆಯಲ್ಲಿ ಕೋವಿಡ್ ಲಸಿಕೆ  ಮೊದಲನೇ ಹಾಗೂ ಎರಡನೇ  ಡೋಸ್ ಶೇ.100 ರಷ್ಟು ಗುರಿಯನ್ನು ಸಾಧಿಸಿದ್ದು  ಬೂಸ್ಟರ್ ಡೋಸ್ ಕಡಿಮೆ ಆಗಿದೆ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ  36000 ಡೋಸ್ ದಾಸ್ತಾನಿದ್ದು ಅರ್ಹ ಫಲಾನುಭವಿಗಳು  ಹತ್ತಿರದ  ಆರೋಗ್ಯ ಕೇಂದ್ರಕ್ಕೆ ಬಂದು  ಲಸಿಕೆ ಪಡೆಯುವಂತೆ ತಿಳಿಸಿದರು.
 ಸಭೆಯಲ್ಲಿ ಜಿಲ್ಲಾಪಂಚಾಯತ್ ಉಪ ಕಾರ್ಯದರ್ಶಿ ೧ ಮತ್ತು ಡಿಎಸ್ಒ ಡಾ.ಮಲ್ಲಪ್ಪ, ಕುಟಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ನಾಗಲೀಕರ್  ಎಲ್ಲಾ ತಾಲ್ಲೂಕಿನ ತಹಾಸೀಲ್ದಾರ್, ತಾಲ್ಲೂಕು ಪಂಚಾಯತ್  ಕಾರ್ಯನಿರ್ವಹಕ ಅಧಿಕಾರಿಗಳು ಬಿಇಒ ಗಳು ತಾಲ್ಲೂಕು ಆರೋಗ್ಯಅಧಿಕಾರಿಗಳು  ತಾಲ್ಲೂಕ್ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು ಹಾಗೂ  ಪಿಹೆಚ್ ಸಿ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.