ಆಚಾರ್ಯ ಶ್ರೀ ಮಧ್ವರ 785ನೇ ಜಯಂತಿ ಅಂಗವಾಗಿ ಭಕ್ತಿ-ಕೀರ್ತನೋತ್ಸವ

ಶಿವಮೊಗ್ಗ: ವಿಶ್ವಗುರುಗಳಾದ ಆಚಾರ್ಯ ಶ್ರೀ ಮಧ್ವರ 785ನೇ ಜಯಂತಿಯ ಅಂಗವಾಗಿ 02-10-22 ರ ಭಾನುವಾರ ನಗರದಲ್ಲಿ ಭಕ್ತಿ-ಕೀರ್ತನೋತ್ಸವವನ್ನು ದುರ್ಗಿಗುಡಿ ರಾಯರ ಮಠ ಮತ್ತು ಭಕ್ತವೃಂದದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. 

ಉತ್ಸವವು ಖ್ಯಾತ ವಿದ್ವಾಂಸರಾದ ಪಂ. ಶ್ರೀ ಬಾಳಗಾರು ಜಯತೀರ್ಥಾಚಾರ್ಯರ ಮಾರ್ಗದರ್ಶನದಲ್ಲಿ ತಿಲಕ್ ನಗರದ ಶ್ರೀ ರಾಮದೇವರ ದೇವಸ್ಥಾನದಿಂದ ಸಂಜೆ 4.30 ಕ್ಕೆ ಹೊರಟು ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ವೃತ್ತ ಹಾಗೂ ಕುವೆಂಪು ರಸ್ತೆಯ ಮೂಲಕ ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವನ್ನು ತಲುಪಲಿದೆ. 

ಶ್ರೀ ಮಠದಲ್ಲಿ ಸಂಜೆ 6 ರಿಂದ 7 ರವರೆಗೆ ಉಪನ್ಯಾಸ, ಶ್ರೀನಿವಾಸ ಕಲ್ಯಾಣ ಮಂಗಳ, ಮಂಗಳಾರತಿ, ಮಂತ್ರಾಕ್ಷತೆ ಮತ್ತು ಪ್ರಸಾದ ವಿನಿಯೋಗವಿರುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಗದೊಡೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಹಾಗೂ ಆಚಾರ್ಯ ಶ್ರೀ ಮಧ್ವರ ಕೃಪೆಗೆ ಪಾತ್ರರಾಗಲು ಆಯೋಜಕರು ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.